May 8, 2024

MALNAD TV

HEART OF COFFEE CITY

ಕಳಸದಲ್ಲಿ ಗುಂಡಿ ಬಿದ್ದ ರಸ್ತೆ ಮಧ್ಯೆ ಮಲಗಿ ದುರಸ್ಥಿಗೆ ಆಗ್ರಹ, ವಾರದ ಗಡುವು

1 min read

ಚಿಕ್ಕಮಗಳೂರು : ತಾಲೂಕು ಕೇಂದ್ರ ಮುಖ್ಯರಸ್ತೆಯೇ ಗುಂಡಿ ಬಿದ್ದಿದ್ದು ಜನ ಓಡಾಡುವುದೇ ದುಸ್ತರವಾಗಿದೆ ಎಂದು ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಜನ ಕೂಡಲೇ ರಸ್ತೆಯನ್ನ ದುರಸ್ಥಿ ಮಾಡುವಂತೆ ಆಗ್ರಹಿಸಿ ರಸ್ತೆ ಮಧ್ಯೆ ಮಲಗಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಳಸ ನೂತನ ತಾಲೂಕು. ಕಳಸ ತಾಲೂಕಿನಿಂದ ಬಾಳೆಹೊಳೆ-ಕಳಸ-ಹೊರನಾಡು ಮಾರ್ಗ ಸಂಪೂರ್ಣ ಗುಂಡಿಬಿದ್ದಿದ್ದು ರಸ್ತೆಯಲ್ಲಿ ಅಡಿಯಳಾಕ್ಕೆ ಗುಂಡಿಗಳು ಬಿದ್ದಿವೆ. ಆಡೋ-ಬೈಕ್‍ಗಳಲ್ಲಿ ಜನ ಓಡಾಡುವುದೇ ಕಷ್ಟವಾಗಿದೆ. ಕಳಸ ತಾಲೂಕಿನ ಹೆಚ್ಚಾಗಿ ಮಧ್ಯಮ ವರ್ಗದ ಕುಟುಂಬಗಳೇ ಇರೋದು. ಜನ ಹೆಚ್ಚಾಗಿ ಬೈಕ್-ಆಟೋ, ಟೆಂಪೋ ಹಾಗೂ ಸಣ್ಣ-ಸಣ್ಣ ಕಾರುಗಳನ್ನೇ ಅವಲಂಬಿಸಿದ್ದಾರೆ.

ಈ ಹಿಂದೆ ನಾಲ್ಕೈದು ಬಾರಿ ಪ್ರತಿಭಟನೆ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆಗ ಅಧಿಕಾರಿಗಳು ರಸ್ತೆಯನ್ನ ಅಗಲ ಮಾಡುತ್ತೇವೆಂದು ಪ್ರತಿಭಟನಾಕಾರರ ಮೂಗಿಗೆ ತುಪ್ಪ ಸವರಿದ್ದರು. ಅಧಿಕಾರಿಗಳ ಭರವಸೆ ಭರವಸೆಯಾಗೇ ಉಳಿದಿದ್ದು ಸ್ಥಳಿಯರು ಸರ್ಕಾರದ ವಿರುದ್ಧ ಮತ್ತೆ ಬೀದಿಗಿಳಿದು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಪ್ರತಿಭಟನೆ ವೇಳೆ ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆ ಇಂಜಿನಿಯರ್‍ಗೆ ಸ್ಥಳಿಯರು ರಸ್ತೆ ಮಧ್ಯೆಯೇ ಕ್ಲಾಸ್ ತೆಗೆದುಕೊಂಡರು. ರಸ್ತೆಯನ್ನ ಇನ್ನೊಂದು ವಾರದಲ್ಲಿ ದುರಸ್ಥಿ ಮಾಡಬೇಕೆಂದು ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ. ದುರಸ್ಥಿ ಮಾಡದಿದ್ದರೆ ಪ್ರತಿಭಟನೆಯ ರೂಪುರೇಷೆಯನ್ನ ಬದಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!