May 21, 2024

MALNAD TV

HEART OF COFFEE CITY

ಜನವರಿಯಲ್ಲಿ ಚಿಕ್ಕಮಗಳೂರಲ್ಲಿ ಛಾಯಾಗ್ರಾಹಕರ ಛಾಯಾ ಮಹೋತ್ಸವ : ಜಿಲ್ಲಾಧ್ಯಕ್ಷ ಜಯಚಂದ್ರ

1 min read

 

 

2023ರ ಜನವರಿಯಲ್ಲಿ ಜಿಲ್ಲೆಯ ಎಲ್ಲಾ ಛಾಯಾಗ್ರಾಹಕರ ಸಂಘಗಳನ್ನ ಒಟ್ಟುಗೂಡಿಸಿ ಛಾಯಾಗ್ರಾಹಕರ ಸಮ್ಮೇಳನವನ್ನ ಮಾಡಲು ತೀರ್ಮಾನಿಸಲಾಗಿದೆ ಎಂದು ಛಾಯಾಗ್ರಾಹಕರ ಸಂಘದ ಜಿಲ್ಲಾಧ್ಯಕ್ಷ ಜಯಚಂದ್ರ ಹೇಳಿದ್ದಾರೆ. ಚಿಕ್ಕಮಗಳೂರು ನಗರದ ಛಾಯಾಗ್ರಾಹಕರ ಸಂಘದ ಕಚೇರಿಯಲ್ಲಿ ಮಾತನಾಡಿದ ಅವರು, ಈ ಸಮ್ಮೇಳನವನ್ನ ಛಾಯಾ ಮಹೋತ್ಸವ ಎಂದೇ ಕರೆಯಲಾಗಿದೆ. ಈ ಮಹೋತ್ಸವದ ಸಮ್ಮೇಳನದಲ್ಲಿ ಎಕ್ಸಿಬಿಷನ್ ರೀತಿ ಕ್ಯಾಮರಾಗಳನ್ನ ಉಚಿತವಾಗಿ ತಪಾಸಣೆ ಮಾಡುವುದಾಗಲಿ, ಉಚಿತ ಕಾರ್ಯಗಾರ ನೀಡುವಂತಹಾ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದ್ದೇವೆ ಎಂದರು. ಹಾಗಾಗಿ, ಜಿಲ್ಲೆಯ ಎಲ್ಲಾ ಛಾಯಾಗ್ರಾಹಕರು ಒಟ್ಟುಗೂಡಿ ಈ ಕಾರ್ಯಕ್ರಮವನ್ನ ಯಶಸ್ವಿ ಮಾಡಬೇಕೆಂದು ಮನವಿ

ಮಾಡಿದ್ದಾರೆ. ಜಿಲ್ಲಾ ಛಾಯಾಗ್ರಾಹಕರ ಸಂಘದ

ಕಚೇರಿಯಲ್ಲಿ ಇಂದು ನಡೆದ ಚೊಚ್ಚಲ ಜಿಲ್ಲಾ ಛಾಯಾಗ್ರಾಹಕರ ಸಂಘದ ಕಮಿಟಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕು ಅಧ್ಯಕ್ಷರು ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!