ಹಳ್ಳಿಯಲ್ಲಿ ಜನಸಾಮಾನ್ಯರಂತೆ ಓಡಾಡ್ತಿರೋ ಕಾಡಾನೆಗಳು, ಜನ ಹೈರಾಣು
1 min readಚಿಕ್ಕಮಗಳೂರು : ಆನೆ ದಾಳಿಯಿಂದ ಕಂಗೆಟ್ಟಿರೋ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಜನ ಇದೀಗ ಮತ್ತೆ ಆನೆ ದಾಳಿಯಿಂದ ದಿಕ್ಕೆಟ್ಟಂತಾಗಿದೆ. ಇಷ್ಟು ದಿನಗಳ ಕಾಡಂಚಿನ ಗ್ರಾಮಗಳು ಹಾಗೂ ಹೊಲ-ಗದ್ದೆ-ತೋಟಗಳಿಗೆ ಲಗ್ಗೆ ಇಟ್ಟು ಬೆಳೆ ನಾಶ ಮಾಡುತ್ತಿದ್ದ ಕಾಡಾನೆಗಳು ಇದೀಗ ಹಳ್ಳಿಗಳ ಒಳಗೂ ಬರುತ್ತಿವೆ. ನಗರ ಪ್ರದೇಶಕ್ಕೂ ಭೇಟಿ ನೀಡುತ್ತಿವೆ. ಹಳ್ಳಿಗಳ ಒಳಗೆ ಜನಸಾಮಾನ್ಯರಂತೆ ಓಡಾಡುತ್ತಿದ್ದು, ನಗರ ಪ್ರದೇಶದಲ್ಲೂ ರಾಜಾರೋಷವಾಗಿ ರೋಡ್ ಕ್ರಾಸ್ ಮಾಡುತ್ತಿದ್ದು ಮೂಡಿಗೆರೆ ತಾಲೂಕಿನ ಜನ ಹೈರಾಣಾಗಿದ್ದಾರೆ.
ಸಖಲೇಶಪುರ ಕಾಡಿನಿಂದ ಬಂದಿರೋ ಐದು ಕಾಡಾನೆಗಳು ಮೂಡಿಗೆರೆ ತಾಲೂಕಿನ ಜನರ ನಿದ್ದೆಗೇಡಿಸಿದೆ. ಮೂಡಿಗೆರೆ ತಾಲೂಕಿನ ಬಿದರಹಳ್ಳಿ, ಬಂಕೇನಹಳ್ಳಿ, ಜೇನುಬೈಲು, ಲೋಕವಳ್ಳಿ ಗ್ರಾಮದಲ್ಲೇ ಕಾಡಾನೆಗಳು ಬೀಡುಬಿಟ್ಟಿದ್ದು ಹಳ್ಳಿಗರು ಆತಂಕದಿಂದ ಬದುಕುವಂತಾಗಿದೆ. ಹಳ್ಳಿ ಹಾಗೂ ಕಾಡಂಚಿನಲ್ಲಿ ಬೇಕಾಬಿಟ್ಟಿ ಓಡಾಡ್ತಿರೋ ಆನೆಗಳು ಬೆಳೆಗಳನ್ನೂ ಕೂಡ ತುಳಿದು ನಾಶ ಮಾಡುತ್ತಿವೆ. ಮೂಡಿಗೆರೆ ತಾಲೂಕಿನ ಗುತ್ತಿ ಹಾಗೂ ಕುಂದೂರು ಸುತ್ತಮುತ್ತ ಒಂಟಿ ಸಲಗ ಭೈರನ ಕಾಟವಿದ್ದರೆ, ಈ ಮಧ್ಯೆ ಸಖಲೇಶಪುರದ ಆನೆಗಳು ಜನರಿಗೆ ಭಯ ಹುಟ್ಟಿಸಿವೆ. ಜನಸಾಮಾನ್ಯರು ರಾತ್ರಿ ಹೊತ್ತು ನಿರಾಳವಾಗಿ ಓಡಾಡೋದಕ್ಕೂ ಹಿಂದೇಟು ಹಾಕುವಂತಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಹಗಲಿರುಳು ಕಾಡಾನೆಗಳ ಕಾರ್ಯಚರಣೆ ಇಳಿಯುವಂತಾಗಿದೆ. ಹಾಗಾಗಿ, ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿರೋ ಮೂಡಿಗೆರೆ ತಾಲೂಕಿನ ಜನ ಆನೆ ಹಾವಳಿಗೆ ಶಾಶ್ವತ ಬ್ರೇಕ್ ಹಾಕುವಂತೆ ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g