May 3, 2024

MALNAD TV

HEART OF COFFEE CITY

ನಿಸ್ವಾರ್ಥ ಸೇವೆ ಮಾಡುತ್ತಿರುವ ಎಲ್ಲರು ಸಮಾಜಕ್ಕೆ ಒಂದು ಆಸ್ತಿ: ಹೆಚ್.ಡಿ ತಮ್ಮಯ್ಯ

1 min read

ಚಿಕ್ಕಮಗಳೂರು: ನಿಸ್ವಾರ್ಥ ಸೇವೆ ಮಾಡುತ್ತಿರುವ ಇವರೆಲ್ಲರೂ ಸಮಾಜಕ್ಕೆ ಒಂದು ಆಸ್ತಿಯಾಗಿದ್ದು, ಸಾರ್ವಜನಿಕರ ಪರವಾಗಿ ಇವರಿಗೆ ಧನ್ಯವಾದಗಳು ತಿಳಿಸುತ್ತೇನೆ ಎಂದು ಶಾಸಕ ಹೆಚ್ ಡಿ ತಮ್ಮಯ್ಯ ಹೇಳಿದರು. ದುರಸ್ತಿಗೊಂಡು ಉಪಯೋಗಕ್ಕೆ ಬಾರದೆ ಹಲವು ವರ್ಷಗಳಿಂದ ಇದ್ದ ಜಿಲ್ಲಾ ಆಸ್ಪತ್ರೆಯ ಹಳೆಯ ಪಿಠೋಪಕರಣಗಳನ್ನು ಲೈಫ್ ಲೈನ್ ಸಂಸ್ಥೆಯಿಂದ ದುರಸ್ತಿಡಿಸಿ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲಾಸ್ಪತ್ರೆಯಲ್ಲಿ ತುಕ್ಕು ಹಿಡಿದ ಹಲವಾರು ವಸ್ತುಗಳನ್ನ ಮತ್ತೆ ಮರುಪಯೋಗಕ್ಕೆ ಸಿದ್ಧಪಡಿಸಿ ಕೊಟ್ಟಂತಹ ಲೈಫ್ ಲೈನ್ಸ್ ಟೆಂಡರ್ ಚಿಕನ್ ಮಾಲೀಕರು ಕಿಶೋರ್ ಕುಮಾರ್ ಅವರಿಗೆ ಧನ್ಯವಾದಗಳು ಇದರಿಂದ ಎಷ್ಟೋ ಬಡವರಿಗೆ ಸಹಾಯವಾಗಲಿದೆ ಎಂದರು.
ಎಲ್ಲ ಶ್ರೀಮಂತರಿಗೂ ಶ್ರೀಮಂತ ಮನಸ್ಸು ಇರುದಿಲ್ಲ, ಆದರೆ ಕಿಶೋರ್ ಕುಮಾರ್ ಅವರು ಅಂತ ಶ್ರೀಮಂತ ಮನಸ್ಸನ್ನು ಹೊಂದಿದ್ದಾರೆ. ಇದು ಇನ್ನಷ್ಟು ಜನರ ಸಮಾಜಮುಖಿ ಕಾರ್ಯಗಳಿಗೆ ಪ್ರೇರಣೆಯಾಗಲಿದೆ ಎಂದು ಹೇಳಿದರು.

ಲೈಫ್ ಲೈನ್ಸ್ ಟೆಂಡರ್ ಚಿಕನ್ ಮಾಲಿಕ ಕಿಶೋರ್ ಕುಮಾರ್ ಹೆಗಡೆ ಮಾತನಾಡಿ, ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ನಮ್ಮ ಕೈಲಾದ ಮಟ್ಟಿಗೆ ಸಹಕರಿಸುತ್ತೇವೆ. ಸರ್ಕಾರಿ ಆಸ್ಪತ್ರೆಯಲ್ಲಿ ನಾವು ಕೊಡುವಂತಹ ಒಂದೊಂದು ರೂಪಾಯಿ ಕೂಡ ಅದೆಷ್ಟೋ ಜನರಿಗೆ ಸಹಾಯವಾಗುತ್ತದೆ. ಸರ್ಕಾರಗಳ ಜೊತೆ ನಾವುಗಳು ಕೂಡ ಸಮಾಜಮುಖಿ ಕೆಲಸಗಳನ್ನು ಮಾಡಬೇಕು. ಅಷ್ಟೇ ಅಲ್ಲದೆ ವೈದ್ಯರು ನಮಗೆ ನೀಡುವಂತಹ ಸೇವೆಗಳಿಗೆ ಸಾರ್ವಜನಿಕರು ಕೃತಜ್ಞರಾಗಿರಬೇಕು ಎಂದು ಕಿವಿಮಾತು ತಿಳಿಸಿದರು.

ಜಿಲ್ಲಾ ವೈದ್ಯಾಧಿಕಾರಿ ಡಾಕ್ಟರ್ ಮೋಹನ್ ಮಾತನಾಡಿ, ಕೋಟ್ಯಾಂತರ ರೂಪಾಯಿ ಬೆಲೆಬಾಳುವ ವಸ್ತುಗಳನ್ನ ಗುಜರಿಗೆ ಹಾಕಬೇಕು ಸಂದರ್ಭದಲ್ಲಿ ಕಿಶೋರ್ ಕುಮಾರ್ ಅವರು ಅದನ್ನ ಮತ್ತೆ ನವೀಕರಿಸಿ ಕೊಟ್ಟಿದ್ದು ಇದರಿಂದ ಬಹಳ ಮೊತ್ತದ ಅಸ್ತಿ ಆಸ್ಪತ್ರೆಯಲ್ಲೇ ಉಳಿಯುವಂತಾಗಿದ್ದು, ಬಡವರ ಬಳಕೆಗು ಬರಲಿದೆ. 7 ಲಕ್ಷ ಮೌಲ್ಯದ ವಸ್ತುಗಳನ್ನ ನವೀಕರಿಸಿಕೊಟ್ಟಿದ್ದು ಇನ್ನು 13 ಲಕ್ಷಗಳ ವರೆಗೆ ವಸ್ತುಗಳ ನವೀಕರಣ ಮಾಡಿ ಕೊಡಲಿದ್ದಾರೆ. ಆರೋಗ್ಯ ಮಾತ್ರವಲ್ಲದೆ ಶಿಕ್ಷಣ ಕ್ಷೇತ್ರಕ್ಕೂ ಕೂಡ ಇವರ ಕೊಡುಗೆ ಬಹಳ ಇದೆ ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!