ಕೋಡಿ ಬಿದ್ದ ಅಯ್ಯನ ಕೆರೆ: ಇತಿಹಾಸ ಪ್ರಸಿದ್ಧ ಕಾಫಿನಾಡಿನ ಕೆರೆಗಳು ಭರ್ತಿ
1 min readಚಿಕ್ಕಮಗಳೂರು: ಜಿಲ್ಲೆಯ ಇತಿಹಾಸ ಪ್ರಸಿದ್ಧ ಬಯಲು ಸೀಮೆಯ ಜೀವನಾಡಿಯಾಗಿರವ ಅಯ್ಯನಕೆರೆ ತುಂಬಿ ಕೋಡಿ ಬಿದ್ದಿದ್ದು ಬಯಲು ಸೀಮೆ ಭಾಗದ ಜನರಲ್ಲಿ ಸಂತಸ ಮನೆಮಾಡಿದೆ. ಕಳೆದ ಎರಡು ವಾರಗಳಿಂದ ಕಾಫಿನಾಡಿನ ಗಿರಿಭಾಗದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಅಯ್ಯನ ಕೆರೆ ತುಂಬಿ ಕೋಡಿ ಬಿದ್ದದೆ. ಸಖರಾಯಪಟ್ಟಣ ಭಾಗದ ಜನರು ಕೆರೆ ಕೋಡಿ ಬೀಳುತ್ತಿದ್ದಂತೆ ಕೋಡಿಗೆ ಪೂಜೆಸಲ್ಲಿ ಸಂಭ್ರಮಿಸಿದ್ದಾರೆ.
ಕೆರೆ ತುಂಬಿ ಕೋಡಿಬಿದ್ದು ಸಖರಾಯಪಟ್ಟಣ ಹಾಗೂ ಕಡೂರು ತಾಲೂಕಿನ ಹಲವು ಹಳ್ಳಿಗಳಿಗೆ ನೀರು ಪೂರೈಸುವ ಈ ಕೆರೆ. ಈ ಬೃಹತ್ ಕೆರೆಯ ಸುತ್ತಲಿನ ಪ್ರದೇಶ ಸೇರಿದಂತೆ 1543 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುತ್ತಿದ್ದು ಕೆರೆಯ ಅಚ್ಚುಕಟ್ಟು ಪ್ರದೇಶದ ಜನರ ಖುಷಿಗೆ ಕಾರಣವಾಗಿದೆ.
ಕಳೆದ ಒಂದುವಾರಗಳಿಂದ ಕಾಫಿನಾಡಲ್ಲಿ ಬಿಟ್ಟು ಬಿಡದೆ ಮಳೆಯಾಗುತ್ತಿದ್ದು ಜಿಲ್ಲೆಯ ಮದಗದ ಕೆರೆ. ಹಿರೇಕೊಳಲೆ ಕೆರೆ ಹಾಗೂ ಅಯ್ಯನಕೆರೆ ಭರ್ತಿಯಾಗಿ ಕೋಡಿ ಬಿದ್ದು ಕಾಫಿನಾಡಿನ ಭಾಗದ ಜನರಲ್ಲಿ ಸಂತಸ ಮನೆ ಮಾಡಿದೆ.
ಅಯ್ಯನಕೆರೆ ಸಖರಾಯಪಟ್ಟಣ ಹಾಗೂ ಕಡೂರು ತಾಲೂಕಿನ ಜೀವಧಾರೆ. ಇಲ್ಲಿಂದ ಹರಿಯುವ ಕಡೆ ಕಾಲುವೆ, ಊರ ಕಾಲುವೆ, ಬಸವನ ಕಾಲುವೆ, ಬ್ರಹ್ಮಸಮುದ್ರ ಕಾಲುವೆಗಳು ಕಡೂರು ತಾಲ್ಲೂಕಿನ ಸುಮಾರು 1574 ಹೇಕ್ಟರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿವೆ.
ಕೆರೆ ತುಂಬಿ ಕೋಡಿ ಬೀಳುತ್ತಿದ್ದಂತೆ ಈಗ ಕೆರೆಯ ಪ್ರದೇಶ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ನೀರು ಕೋಡಿಯಿಂದಿಳಿದು ಹೋಗುವ ವೈಭವವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಕೆರೆಯ ಕಡೆಗೆ ಆಗಮಿಸುತ್ತಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g