May 17, 2024

MALNAD TV

HEART OF COFFEE CITY

ಮಂತ್ರಿಮಂಡಲದಲ್ಲಿ ಮಲೆನಾಡು ಭಾಗವನ್ನ ಕಡೆಗಣಿಸಲಾಗಿದೆ : ಶಾಸಕ ರಾಜೇಗೌಡ

1 min read

ಶೃಂಗೇರಿ: ಮಂತ್ರಿಮಂಡಲದಲ್ಲಿ ಮಲೆನಾಡು ಭಾಗವನ್ನ ಕಡೆಗಣಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಗೆ ಪ್ರಾತಿನಿಧ್ಯ ಕೊಟ್ಟಿಲ್ಲ ಎಂದು ಶೃಂಗೇರಿ ಶಾಸಕ ರಾಜೇಗೌಡ ಪ್ರತಿಕ್ರಿಯಿಸಿದ್ದಾರೆ.

ಬಸವರಾಜ್ ಬೊಮ್ಮಾಯಿ ಅವರ ಮುಖ್ಯಮಂತ್ರಿ ಆಯ್ಕೆಗೆ ಅಭಿನಂದನೆಗಳು. ಮಂತ್ರಿ ಮಂಡಲದಲ್ಲಿ ನಮ್ಮ ಜಿಲ್ಲೆಗೆ ಮಂತ್ರಿ ಮಂಡಲ ನೀಡಿಲ್ಲ. ಮೂಡಿಗೆರೆ ಭಾಗದ ಶಾಸಕ ಕುಮಾರಸ್ವಾಮಿ ಇದ್ರು. ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಅವರು ಇದ್ರು. ಆದ್ರೆ ಯಾರಿಗೂ ಮಂತ್ರಿ ಮಂಡಲ ಕೊಟ್ಟಿಲ್ಲ ಅಲ್ಲದೆ ಬಯಲು ಸೀಮೆ ಭಾಗದಲ್ಲೂಅವಕಾಶ ನೀಡಿಲ್ಲ. ಚಿಕ್ಕಮಗಳೂರನ್ನ ಮಂತ್ರಿಮಂಡಲದಿಂದ ಕಡೆಗಣಿಸಲಾಗಿದೆ. ಪರಕೀಯರು ನಮ್ಮ ಜಿಲ್ಲೆಯ ಉಸ್ತುವಾರಿಯಾಗಿರೋದು ಕಾಣುತ್ತಿದೆ. ಮಲೆನಾಡು ಭಾಗದ ಪ್ರಾತಿನಿಧ‍್ಯಕೊಟ್ಟಿಲ್ಲ. ನಮ್ಮನ್ನು ಎಲ್ಲದಕ್ಕೂ ಬಳಕೆ ಮಾಡಿಕೊಳ್ಳುತ್ತಿದೆ, ಆದ್ರೆ ಸರ್ಕಾರ ನಮ್ಮ ಜಿಲ್ಲೆಯನ್ನ ಕಡೆಗಣಿಸಲಾಗಿದೆ ಎಂದು ಶೃಂಗೇರಿ ಶಾಸಕ ರಾಜೇಗೌಡ ಪ್ರತಿಕ್ರಿಯಿಸಿದರು.

ಶೃಂಗೇರಿ ವಿಧಾನ ಸಭಾ ಕ್ಷೇತ್ರದ ಎನ್ ಪುರ ಭಾಗದಲ್ಲಿಮಳೆಯಿಂದ ಅತಿವೃಷ್ಠಿಯಿಂದ ತುಂಬ ಹಾನಿಯಾಗಿದೆ. ಅನೇಕ ಸೇತುವೆಗಳು ಹಾಗೂ ರಸ್ತೆಗಳು, ಕೃಷಿ ಜಮೀನುಗಳಲ್ಲಿ ಮರಳು ಮಣ್ಣು ಮುಚ್ಚಿಕೊಂಡು ನೂರಾರು ಎಕರೆ ಪ್ರದೇಶ ಗದ್ದೆ ಹಾನಿಯಾಗಿವೆ. ಇದರ ಬಗ್ಗೆ ಗಮನ ಹರಿಸಿ ಕೂಡಲೇ  ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದ್ರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!