May 14, 2024

MALNAD TV

HEART OF COFFEE CITY

ಅಸಮಧಾನ ಹೊರಹಾಕಿದ ಜೆಡಿಎಸ್ ಅಭ್ಯರ್ಥಿ ಧನಂಜಯ್

1 min read

ಕಡೂರು : ವೈಎಸ್.ವಿ. ದತ್ತರಿಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದಾಗ ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದರು. ಆದರೆ ಸ್ವತಂತ್ರವಾಗಿ ಸ್ಪರ್ಧಿಸಿದರೆ ಸೋಲುತ್ತೇನೆಂಬ ಭಾವಿಸಿ, ದೇವೇಗೌಡರು, ರೇವಣ್ಣ ಮೇಲೆ ಒತ್ತಡ ತಂದು ಪಕ್ಷ ಸೇರಿದ್ದಾರೆ. ಪ್ರಜ್ವಲ್ ಅವರ ಹೆಸರನ್ನ ಘೋಷಿಸಿದ್ದಾರೆ ಎಂದು ತಿಳಿಯಿತು. ಒತ್ತಡಕ್ಕೆ ಒಳಗಾಗಿ ಘೋಷಿಸಿದ್ದಾರೆ, 2-3 ದಿನದಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತೆ. ನಾಯಕರು ಚರ್ಚಿಸಿ ಒಳ್ಳೆ ನಿರ್ಧಾರಕ್ಕೆ ಬರುತ್ತಾರೆ  ಎಂಬ ನಂಬಿಕೆ ಇದೆ ಎಂದು ಕಡೂರು ಜೆಡಿಎಸ್ ಅಭ್ಯರ್ಥಿ ಧನಂಜಯ್ ದತ್ತಾ ವಿರುದ್ಧ ಅಸಮಧಾನ ಹೊರ ಹಾಕಿದರು.

ಕುಮಾರಸ್ವಾಮಿ, ಪ್ರಜ್ಬಲ್, ಇಬ್ರಾಹಿಂ ನೇತೃತ್ವದಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದ ಧನಂಜಯ್ ರವರನ್ನು ಕಡೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು. ದತ್ತಾರವರಿಗೆ ಟಿಕೆಟ್ ಘೋಷಣೆ ಮಾಡಿದ ಅಸಮಧಾನ ಹೊರ ಹಾಕಿರುವ  ಧನಂಜಯ್ ರವರು, ಪಕ್ಷ ಸಂಘಟನೆಗೆ ಹಾಸನಕ್ಕೆ ಕಳಿಸಿದ್ದರು, ಕಡೂರಿಗೆ ಬಂದ ಒಂದೇ ವಾರಕ್ಕೆ ಹಾಸನಕ್ಕೆ ವಾಪಸ್ ಕರೆದರು, ಹಾಸನ ಜೆಡಿಎಸ್ ಹಲವು ಪದಾಧಿಕಾರಿಗಳು, ಕಾರ್ಯಕರ್ತರ ಮಧ್ಯೆ ನನ್ನ ಹೆಸರು ಘೋಷಿಸಿದ್ದರು, ದತ್ತ ಪಕ್ಷ ತೊರೆದ ಮೇಲೆ ನಾನಿಲ್ಲದೆ ಜೆಡಿಎಸ್ ಇಲ್ಲ ಎಂಬಂತೆ ಹಿಡಿತದಲ್ಲಿ ಇಟ್ಟುಕೊಂಡಿದ್ದರು, ನಾನು ಅದು ಸುಳ್ಳು ಎಂದು ನಿರೂಪಿಸಿದೆ, ಕುಮಾರಸ್ವಾಮಿ ನಾನು ಕುಮಾರಸ್ವಾಮಿ ಅಲ್ಲ, ನಾನೇ ಧನಂಜಯ್ ಎಂದು ಕುಮಾರಸ್ವಾಮಿ  ಮತ ಕೇಳಿದ್ರು, ದತ್ತ ಅವರಿಗೆ ಟಿಕೆಟ್ ಸಿಗದಿದ್ದಾಗ ಸ್ವತಂತ್ರವಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದರು. ಸ್ವತಂತ್ರವಾಗಿ ಸ್ಪರ್ಧಿಸಿದರೆ ಸೋಲುತ್ತೇನೆಂದು ಭಾವಿಸಿದ್ದರು, ದೇವೇಗೌಡರು, ರೇವಣ್ಣ ಮೇಲೆ ಒತ್ತಡ ತಂದು ಪಕ್ಷ ಸೇರಿದ್ದಾರೆ, ಇಂದು ಮಧ್ಯಾಹ್ನ ಪ್ರಜ್ವಲ್ ನನ್ನ ಕಚೇರಿಗೆ ಬಂದು ಬನ್ನಿ ದತ್ತ ಜೊತೆ ಮಾತನಾಡೋಣ ಎಂದರು, ನಾನು ಬರ್ತೀನಿ ನೀವು ಹೋಗಿ ಎಂದು ಹೇಳಿದ್ದೆ, ಅವರ ಜೊತೆ ಹೋಗಲು ಆಗಿಲ್ಲ, ಪ್ರಜ್ವಲ್ ಅವರ ಹೆಸರನ್ನ ಘೋಷಿಸಿದ್ದಾರೆ ಎಂದು ತಿಳಿಯಿತು, ಒತ್ತಡಕ್ಕೆ ಒಳಗಾಗಿ ಘೋಷಿಸಿದ್ದಾರೆ, 2-3 ದಿನದಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತೆ, ನಾಯಕರು ಚರ್ಚಿಸಿ ಒಳ್ಳೆ ನಿರ್ಧಾರಕ್ಕೆ ಬರುತ್ತಾರೆ  ಎಂಬ ನಂಬಿಕೆ ಇದೆ ಎಂದು ಹೇಳಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!