ದತ್ತ ಅಫಿಷಿಯಲ್ ಕ್ಯಾಂಡಿಡೇಟ್ ಅಲ್ಲ, ನಾನೇ ಅಧಿಕೃತ ಅಭ್ಯರ್ಥಿ : ಧನಂಜಯ್
1 min readಕಡೂರು : ವೈ.ಎಸ್.ವಿ. ದತ್ತಾ ಕಾಂಗ್ರೆಸ್ ಸೇರುವಾಗ ನೀಡಿರುವ ತಮ್ಮ ಹೇಳಿಕೆಯನ್ನ ಹಿಂಪಡೆದು ಕಡೂರು ಜನತೆ, ಜೆಡಿಎಸ್ ಕಾರ್ಯಕರ್ತರ ಕ್ಷಮೆ ಕೇಳಬೇಕು, ಕ್ಷಮೆ ಕೇಳದೆ ನಿಮ್ಮ ಹೆಸರು ಘೋಷಿಸಿದ್ರೆ ಡಿಪಾಜಿಟ್ ಇಲ್ಲದೆ ಸೋಲಿಸುತ್ತಾರೆ ಎಂದು ಕಡೂರು ಕ್ಷೇತ್ರದ ಜೆಡಿಎಸ್ ಘೋಷಿತ ಅಭ್ಯರ್ಥಿ ಧನಂಜಯ್ ಎಚ್ವರಿಕೆ ನೀಡಿದರು.
ಕಡೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ಘೋಷಿತ ಅಭ್ಯರ್ಥಿ ಧನಂಜಯ್, ಕಡೂರಿಗೆ ನಾನೇ ಜೆಡಿಎಸ್ ಅಭ್ಯರ್ಥಿ, ನಾನು ಘೋಷಿತ ಅಭ್ಯರ್ಥಿ, ದತ್ತ ಅವರು ಅನಗತ್ಯವಾಗಿ ದೇವೇಗೌಡರ ಬಾಂಧವ್ಯವನ್ನ ದುರುಪಯೋಗ ಮಾಡಿಕೊಂಡಿದ್ದಾರೆ, 92 ವರ್ಷದ ದೇವೇಗೌಡರ ಮನೆಗೆ ಹೋಗಿ ದೇವೇಗೌಡರು, ರೇವಣ್ಣ, ಪ್ರಜ್ವಲ್ ಮೇಲೆ ಒತ್ತಡ ಹೇರಿದ್ದಾರೆ. ಅವರನ್ನ ಮನೆಗೆ ಕರೆಸಿ ಒತ್ತಡ ಹೇರಿ ಹೆಸರು ಘೋಷಿಸಿಕೊಂಡಿದ್ದಾರೆ. ದತ್ತ ಕಾಂಗ್ರೆಸ್ ಸೇರಿದಾಗ ಜೆಡಿಎಸ್, ಕುಮಾರಣ್ಣ ಮೇಲೆ ಆರೋಪ ಮಾಡಿದ್ದಾರೆ. ಜೆಡಿಎಸ್ ಬಿ ಟೀಂ ಆಫ್ ಬಿಜೆಪಿ ಎಂದಿದ್ದಾರೆ. ಕಾಂಗ್ರೆಸ್ ಒತ್ತಡದಿಂದ ಹಾಗೇ ಹೇಳಿದೆ ಎಂದು ಜೆಡಿಎಸ್ ಕಾರ್ಯಕರ್ತರಿಗೆ ಕ್ಷಮೆ ಕೇಳಬೇಕು. ದತ್ತ ಅಫಿಯಲ್ ಕ್ಯಾಂಡಿಡೇಟ್ ಅಲ್ಲ, ನಾನೇ ಅಧಿಕೃತ ಅಭ್ಯರ್ಥಿ. ಇಂದಿನ ಸಭೆಯಲ್ಲಿ ಕಡೂರಿಗೆ ಯಾರು ಅಭ್ಯರ್ಥಿ ಅಂತ ಫೈನಲ್ ಆಗುತ್ತೆ ಎಂದು ಹೇಳಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g