ಕೆರೆಗೆ ಬಾಗಿನ ಅರ್ಪಿಸುವುದೇ ದೊಡ್ಡ ಸಾಧನೆಯೇ…?! – ರೇಖಾ ಹುಲಿಯಪ್ಪಗೌಡ
1 min readಚಿಕ್ಕಮಗಳೂರು : ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಬಯಲು ಸೀಮೆಯ ಬಹಳಷ್ಟು ಕೆರೆಗಳು ತುಂಬಿ, ಕೋಡಿ ಬಿದ್ದು ನೀರು ವ್ಯರ್ಥವಾಗಿ ಹರಿಯುತ್ತಿದೆ. ಆದರೆ ಸ್ಥಳೀಯ ಶಾಸಕರು ಕೆರೆಗಳಿಗೆ ಬಾಗಿನ ಬಿಡುವುದೆ ದೊಡ್ಡ ಸಾಧನೆ ಎಂಬಂತೆ ಬಾಗಿನ ಬಿಡುವ ಸಂಭ್ರಮದಲ್ಲಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ ಕಿಡಿಕಾರಿದರು.
ಅವರು ಸುದ್ದಿಗೋಷ್ಠಿಯಲ್ಲಿ ಬಯಲು ಸೀಮೆ ಭಾಗಗಳಲ್ಲಿ ಕೋಡಿ ಬಿದ್ದ ಕೆರೆಗಳ ನೀರು ವ್ಯರ್ಥವಾಗಿ ಹರಿಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ ಮಾತನಾಡುತ್ತ, ಕೆಲ ವರ್ಷಗಳಿಂದ ಸರಿಯಾದ ಮಳೆಯಾಗದೆ ಬರಗಾಲದ ವಾತಾವರಣವಿತ್ತು. ಆದರೆ ಈ ಬಾರಿ ಜಿಲ್ಲೆಯಲ್ಲಿ ಉತ್ತಮವಾಗಿ ಮಳೆಯಾಗಿ ಬಯಲು ಸೀಮೆಯ ಕೆರೆಗಳು ತುಂಬಿ ಕೋಡಿ ಬಿದ್ದು ನೀರು ವ್ಯರ್ಥವಾಗಿ ಹರಿಯುತ್ತಿರುವುದಲ್ಲದೇ, ಸ್ಥಳೀಯ ರೈತರು ತಾವು ಬೆಳೆದ ಬೆಳೆ ನಾಶವಾಗಿ ಆರ್ಥಿಕ ಸಂಕಷ್ಟದಲ್ಲಿದ್ದರೆ, ರೈತರ ಸಂಕಷ್ಟ ಹರಿಯುವ ಪ್ರಮಾಣಿಕ ಪ್ರಯತ್ನವನ್ನು ಮಾಡದ ಸ್ಥಳೀಯ ಶಾಸಕರು ಬಾಗಿನ ಬಿಡುವ ಸಂಭ್ರಮದಲ್ಲಿದ್ದಾರೆ. ಅಯ್ಯನಕೆರೆ ಕೋಡಿ ಬಿದ್ದ ನೀರು ವ್ಯರ್ಥವಾಗಿ ವಾಣಿವಿಲಾಸ ಸಾಗರವನ್ನು ಸೇರುತ್ತಿದೆ. ಈ ನೀರನ್ನು ಸದ್ಬಳಕೆ ಮಾಡಿಕೊಂಡಿದ್ದರೆ ರೈತರ ಬಾಳು ಹಸನಾಗುತ್ತಿತ್ತು. ಬಯಲು ಸೀಮೆ ಭಾಗಗಳಲ್ಲಿ ಕೋಡಿ ಬಿದ್ದ ಕೆರೆಗಳ ನೀರನ್ನು ವ್ಯರ್ಥವಾಗಿ ಹರಿಯಲು ಬಿಡದೆ ಮುಂದಾಲೋಚನೆಯಿಂದ ಸದ್ಬಳಕೆ ಮಾಡಿಕೊಳ್ಳುವ ಹೊಣೆಗಾರಿಕೆ ತೋರಿಸಬೇಕೆಂದು ಕಿವಿ ಮಾತು ಹೇಳಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g