ಕ್ಷೇತ್ರದಲ್ಲಿ ನಡೆದಿರುವ ನೀರಾವರಿ ಕಾಮಗಾರಿಗಳು ಕಳಪೆ – ರವೀಶ್ ಕ್ಯಾತನಬೀಡು
1 min readಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಾಗೂ ಚಿಕ್ಕಮಗಳೂರು ಕ್ಷೇತ್ರದಲ್ಲಿ ನಡೆದಿರುವ ನೀರಾವರಿ ಇಲಾಖೆಯಲ್ಲಿ ನಡೆದಿರುವ ಬಹುತೇಕ ಕಾಮಗಾರಿಗಳು ಉದ್ದೇಶ ಪೂರಿತ ಕಳಪೆ ಕಾಮಗಾರಿಗಳಾಗಿವೆ. ಕಳಪೆ ಕಾಮಗಾರಿ ನಡೆಸಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಉಸ್ತುವಾರಿ ನೋಡಿಕೊಂಡ ಇಂಜಿನಿಯರ್ ಗಳನ್ನು ಅಮಾನತ್ತು ಮಾಡಬೇಕೆಂದು ಕೆ.ಪಿ.ಸಿ.ಸಿ ವಕ್ತಾರರಾದ ರವೀಶ್ ಕ್ಯಾತನಬೀಡು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾವೇರಿ ನಿಗಮದಿಂದ ಕೈಗೊಂಡಿರುವ ಬ್ಯಾಟರಹಳ್ಳಿ ಬೆರಟಿಕೆರೆಗೆ, ಗಂಗಬಸವನಹಳ್ಳಿ ಪಿಳ್ಳೆನಹಳ್ಳಿ ರಸ್ತೆ ಮಾರ್ಗವಾಗಿ ಹೋಗುವ ಫೀಡರ್ ಚಾನಲ್ ಸಂಪೂರ್ಣವಾಗಿ ಕಳಪೆಯಾಗಿದ್ದು, ನಿರ್ವಹಿಸಿದ ಒಂದೇ ತಿಂಗಳಿಗೆ 20 ಭಾಗಗಳಲ್ಲಿ ಮುರಿದು ಬಿದ್ದು ಹೋಗಿದೆ. ನಾಗೇನಹಳ್ಳಿ ಫೀಡರ್ ಚಾನಲ್ ಕೂಡ ಮುರಿದು ಬಿದ್ದು ಹೋಗಿದೆ. ಕಾವೇರಿ ನಿಗಮದಿಂದ ಜಿಲ್ಲೆಯಲ್ಲಿ ನಡೆದಿರುವ ಕಾಮಗಾರಿಗಳ ತನಿಖೆಯಾಗಬೇಕು. ಎಂತಹ ಪ್ರಭಾವಿಯಾಗಿದ್ದರು ಕಾಮಗಾರಿ ನಡೆಸಿದ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಮಾಜಿ ಶಾಸಕರು ಅನುದಾನಗಳನ್ನು ತಡೆಹಿಡಿದರು ಎಂದು ಹೇಳುತ್ತಾರೆ. ಅವರ ಅವಧಿಯಲ್ಲೇ ಈ ರೀತಿಯ ಕಾಮಗಾರಿಗಳಾಗಿದ್ದು ಈ ಬಗ್ಗೆ ಉತ್ತರಿಸಬೇಕು. ಕ್ಷೇತ್ರದಲ್ಲಿರುವ ಬಹಳಷ್ಟು ಕೆರೆಗಳಿಗೆ ತಲಾ 20 ಲಕ್ಷ ಹಣ ನೀಡಿದ್ದು ಅಲ್ಲಿ ಯಾವುದೇ ಕಾಮಗಾರಿಗಳು ಆಗಿಲ್ಲ. ಒತ್ತಾಯಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g