ಭ್ರಷ್ಟಾಚಾರ ಮಾಡಿಲ್ಲ ಎಂದು ಕನಸಿನಲ್ಲೂ ಹೇಳಬೇಡಿ – ಎಸ್.ಎಲ್ ಭೋಜೆಗೌಡ
1 min readಚಿಕ್ಕಮಗಳೂರು : ಮಾಜಿ ಶಾಸಕರು ಅಭಿವೃದ್ಧಿಗೆ ತಂದಿದ್ದ ಅನುದಾನವನ್ನು ಈಗಿನ ಸರ್ಕಾರ ತಡೆಹಿಡಿದಿದೆ ಎಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ಪ್ರತಿಭಟನೆ ಮಾಡುವುದ ಅವರು ಹಕ್ಕು. ಪ್ರತಿಭಟನೆ ಮಾಡುವ ಮುಂಚೆ ಯಾವ ಯಾವ ಕಾಮಗಾರಿಗೆ ಅನುದಾನ ತಂದಿದ್ದರು ಎನ್ನುವುದನ್ನು ಶ್ವೇತ ಪತ್ರ ಹೊರಡಿಸುವ ಮೂಲಕ ತಿಳಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೆಗೌಡ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ಷೇತ್ರದ ಅಭಿವೃದ್ದಿ ದೃಷ್ಠಿಯಿಂದ ಈಗಿನ ಸರ್ಕಾರ ಅನುದಾನ ತಡೆಹಿಡಿದಿದ್ದರೆ ನಿಮ್ಮ ಜೊತೆ ನಾವು ಸೇರಿ ಪ್ರತಿಭಟನೆ ಮಾಡುತ್ತೇವೆ. ಸರ್ಕಾರದ ಆದೇಶ ಬಂದಿದೆ ಎಂಬ ವಿಚಾರ ಇಟ್ಟುಕೊಂಡು ಅದು ಚಿಕ್ಕಮಗಳೂರಿಗೂ ಅನ್ವಯಿಸುತ್ತದೆ ಎಂದು ಪ್ರತಿಭಟನೆ ಮಾಡುವುದು ಸರಿಯಲ್ಲ. ಚುನಾವಣೆ ಸಂದರ್ಭದಲ್ಲಿ ಬಹಳಷ್ಟು ಜನಕ್ಕೆ ನಿಮ್ಮಲ್ಲಿದ್ದ ಯಂತ್ರೋಪಕರಣಗಳನ್ನು ಸೇರಿದಂತೆ ಕಚ್ಚಾ ಸಾಮಾಗ್ರಿಗಳನ್ನು ನೀಡಿರುವಿರಿ. ಚುನಾವಣೆ ಸಮಯದಲ್ಲಿ ಯಾವುದೇ ಅನುಮೋದನೆ ಇಲ್ಲದೆ ಕಾಮಗಾರಿಗಳನ್ನು ಮಾಡಿಕೊಂಡು ಬಂದಿರುವಿರಿ, ಇದನ್ನು 20 ವರ್ಷಗಳಿಂದ ಮಾಡಿಕೊಂಡು ಬಂದಿರುವಿರಿ. ಚುನಾವಣೆಯಲ್ಲಿ ಸೋತಿದ್ದೀರಿ. ಸೋಲಲು ಕಾರಣವನ್ನು ಅರಿಯಬೇಕು. ಯಾವುದೇ ಅನುಮೋದನೆ ಇಲ್ಲದೆ ಚುನಾವಣೆಯಲ್ಲಿ ಮಾಡಿದ ಕೆಲಸ ಚುನಾವಣೆಯಲ್ಲಿ ಸೋತ ನಂತರ ಜನರ ಪಾಲಿಗೆ ಉಳಿದಿದೆ. ಅಬಿವೃದ್ಧಿ ಕೆಲಸ ಮಾಡದೆ ಚುನಾವಣೆಯಲ್ಲಿ ಸೋತಿದ್ದೇನೆ ಎಂಬ ಕಳಂಕ ಇಲ್ಲ ಎಂದು ಹೇಳಿರುವಿರಿ. ಆದರೆ ಅಭಿವೃದ್ಧಿ ಹೆಸರಲ್ಲಿ ನೂರಾರು ಕೋಟಿ ರೂಪಾಯಿ ಭ್ರಷ್ಟಾಚಾರ ಆಗಿದಿಯಲ್ಲ, ಆ ಭ್ರಷ್ಟಾಚಾರದಿಂದ ನೀವು ಸೋತಿರುವುದು. ನಾನು ಪ್ರಾಮಾಣಿಕ ನಾನು ಎಲ್ಲೂ ಭ್ರಷ್ಟಾಚಾರ ಮಾಡಿಲ್ಲ ಎಂದು ಕನಸಿನಲ್ಲೂ ಹೇಳಬೇಡಿ ಎಂದು ಕಿವಿ ಮಾತು ಹೇಳಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g