ಮಲೆನಾಡಲ್ಲಿ ಮಳೆ ಅಬ್ಬರ, ರಸ್ತೆಯಲ್ಲಿ ನದಿಯಂತೆ ಹರಿದ ನೀರು
1 min readಮಳೆ ಜಿಲ್ಲೆ ಎಂದೇ ಖ್ಯಾತಿಯಾಗಿರುವ ಚಿಕ್ಕಮಗಳೂರು ಜಿಲ್ಲೆಯಲ್ಲೇ ಕಳೆದೊಂದು ತಿಂಗಳಿನಿಂದ ಮಳೆಗಾಗಿ ಆಕಾಶ ನೋಡುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ, ನಿನ್ನೆ ಸಂಜೆ ಸಾಧಾರಣವಾಗಿ ಸುರಿದಿದ್ದ ಮಳೆ ಇಂದು ಸುಮಾರು ಮೂರು ಗಂಟೆಗಳ ಭಯಂಕರ ಮಳೆ ಸುರಿದಿದ್ದು, ರಸ್ತೆಯಲ್ಲಿ ಮಳೆ ನೀರು ನದಿಯಂತೆ ಹರಿದಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಬಾಳೂರು, ಬಣಕಲ್, ಜಾವಳಿ ಸುತ್ತಮುತ್ತ ಭಾರೀ ಮಳೆ ಸುರಿದಿದೆ. ಹೀಗೆ ಧಾರಾಕಾರವಾಗಿ ಸುರಿದ ಮಳೆಯಿಂದ ರೈತರು ಹಾಗೂ ಅಡಿಕೆ, ಕಾಫಿ, ಮೆಣಸು ಬೆಳೆಗಾರರು ಸಂತೋಷಪಡಬೇಕೋ ಅಥವ ದುಖಃ ಪಡಬೇಕೋ ಗೊಂದಲದಲ್ಲಿದ್ದಾರೆ. ಯಾಕಂದ್ರೆ, ಈಗಾಗಲೇ ಒಂದೆಡೆ ಬರದಿಂದ ಬೆಳೆ ಸಂಪೂರ್ಣ ಹಾಳಾಗಿದೆ. ಮತ್ತೊಂದೆಡೆ ಘಟ್ಟಪ್ರದೇಶದ ತಪ್ಪಲಿನಲ್ಲಿನ ಅಕಾಲಿಕ ಮಳೆಯಿಂದ ಕಾಫಿ ಹಣ್ಣಾಗಿದೆ. ಕೆಲ ಭಾಗದಲ್ಲಿ ಕಾಫಿ ಕೊಯ್ಲಿಗೆ ಬಂದಿದೆ. ಇನ್ನ ಒಂದೆರಡು ತಿಂಗಳಲ್ಲಿ ಕಾಫಿ ಹಣ್ಣನ್ನ ಕೊಯ್ಲು ಮಾಡುತ್ತಾರೆ. ಆದ್ರೆ, ಈಗ ಸುರಿದಂತ ಮಳೆ-ಗಾಳಿಯಿಂದ ಕಾಫಿ ಉದುರುವ ಆತಂಕದಲ್ಲಿ ಬೆಳೆಗಾರರಿದ್ದಾರೆ. ಇನ್ನು ಸುಮಾರು ಮೂರು ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆಯಿಂದ ರಸ್ತೆ ಬದಿಯ ವಿದ್ಯುತ್ ಕಂಬಗಳ ಮೇಲೆ ಮರದ ಟೊಂಗೆಗಳು ಬಿದ್ದು ಗ್ರಾಮೀಣ ಭಾಗ ಕತ್ತಲಲ್ಲಿ ಇರುವಂತಾಗಿದೆ. ಆದರೆ, ಮಳೆ ಇಲ್ಲದೆ ತೀವ್ರ ಬರದಿಂದ ಕಂಗಾಲಾಗಿರುವ ಮಳೆ ಜಿಲ್ಲೆಯ ಮಲೆನಾಡಿಗರು ಮಳೆಗಾಗಿ ಆಕಾಶ ನೋಡುತ್ತಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g