May 5, 2024

MALNAD TV

HEART OF COFFEE CITY

ಪೊಲೀಸ್ ವಿಚಾರಣಾ ನೋಟಿಸ್ ಗೆ ಹಾಜರಾಗದ ಆರೀಫ್ ಮನೆಗೆ ಪೊಲೀಸರ ದಾಳಿ

1 min read

 

ಚಿಕ್ಕಮಗಳೂರು: ಭಯೋತ್ಪಾದಕ ಸಂಘಟನೆ ಜೊತೆಗೆ ಲಿಂಕ್ ಹೊಂದಿದೆ ಎಂಬ ಕಾರಣಕ್ಕಾಗಿ ದೇಶದಾದ್ಯಂತ ಕೇಂದ್ರ ಸರ್ಕಾರವು ಪಿ.ಎಫ್.ಐ ಬ್ಯಾನ್ ಆದ ಹಿನ್ನೇಲೆ, ಜಿಲ್ಲೆಯಲ್ಲಿ ಪಿ.ಎಫ್.ಐ ಕಾರ್ಯಕರ್ತ ಎನ್ನಲಾದ ಆರೀಫ್ ಮನೆಗೆ ಅಧಿಕಾರಿಗಳು, ಪೊಲೀಸರ ದಾಳಿ ನಡೆಸಿದ್ದಾರೆ.

ಕೇಂದ್ರದ ಬ್ಯಾನ್ ಹಿನ್ನೆಲೆಯಲ್ಲಿ ಈಗಾಗಲೇ ಪೊಲೀಸರು ಮಾಹಿತಿ ನೀಡಿದ್ದರೂ ಸಹ ಠಾಣೆಗೆ ಹಾಜರಾಗದ ಹಿನ್ನೆಲೆ ಕಾರ್ಯಪ್ರವೃತ್ತರಾದ ಪೊಲೀಸರಿಂದ ಆರೀಫ್ ಮನೆಗೆ ದಾಳಿ ನಡೆಸಲಾಗಿದೆ.

ಆರೀಫ್ ಎಂಬುವರ ಮನೆಯು ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯ ಆಲೂರು ಸಮೀಪದ ವಗಾರ್ ರಸ್ತೆಯಲ್ಲಿದೆ.

ಸದರಿ ದಾಳಿಯು ಡಿಸಿ ಮಾರ್ಗದರ್ಶನ ಮೇರೆಗೆ ನಡೆಸಲಾಗಿದ್ದು ಸರ್ಕಾರಿ ಆದೇಶಕ್ಕೆ ಬದ್ಧವಾಗಿದೆ.

ದೇಶಾದ್ಯಂತ ಪಿಎಫ್ ಬ್ಯಾನ್ ಮಾಡಲಾದ ಹಿನ್ನೆಲೆಯಲ್ಲಿ
ಎರಡು ದಿನದ ಹಿಂದೆ ಠಾಣೆಗೆ ಬಂದು ಹಾಜರಾಗುವಂತೆ ಸೂಚನೆ ನೀಡಿದ್ದರೂ ತಿರಸ್ಕಾರ ಮಾಡಲಾಗಿತ್ತು ಎನ್ನಲಾಗಿದೆ. ಇದರಿಂದಾಗಿಯೇ ಜಿಲ್ಲಾಧಿಕಾರಿಯಿಂದ ಸರ್ಚ್ ವಾರೆಂಟ್ ಆದೇಶ ನೀಡಲಾಯಿತು.

ಸಿಪಿಐ ಸತ್ಯನಾರಾಯಣ, ಪಿಎಸ್ಐಗಳಾಧ ಸಜಿತ್, ಕೀರ್ತಿ ಕುಮಾರ್ ಹಾಗೂ ಸಿಬ್ಬಂದಿಗಳಿಂದ ದಾಳಿ ನಡೆಸಿದ್ದು ಇಂದು ಮನೆ ಮೇಲೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ಮಾಡಲಾಯಿತು. ಸದರಿ ದಾಳಿ ನೇಸಿದ ಪೊಲೀಸರಿಗೆ ಕಂದಾಯ ಇಲಾಖೆ ಅಧಿಕಾರಿಗಳು ಸಾಥ್ ನೀಡಿ ಕರ್ತವ್ಯ ನಿರ್ವಹಿಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!