May 17, 2024

MALNAD TV

HEART OF COFFEE CITY

ಗ್ರಾಪಂ ಉಪಾಧ್ಯಕ್ಷೆನಿಂದ ಸರ್ಕಾರಿ ಜಾಗ ಒತ್ತುವರಿ, ಪಂಚಾಯಿತಿಗೆ ಬೀಗ ಹಾಕಿದ ಸ್ಥಳಿಯರು

1 min read

 

ಚಿಕ್ಕಮಗಳೂರು : ತಾಲೂಕಿನ ಕೆ.ಬಿ.ಹಾಳ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಛಾಯಾ ದಯಾನಂದ್ ಅವರು ಸರ್ಕಾರಿ ಪಾಠ ಶಾಲೆಯ ಪಕ್ಕದಲ್ಲಿರುವ ಸರ್ಕಾರಿ ಜಾಗವನ್ನ ಅವರ ತಂದೆ ಒತ್ತುವರಿ ಮಾಡಿ ಮನೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಒತ್ತುವರಿಯನ್ನ ತೆರವು ಮಾಡುವವರೆಗೂ ಬೀಗ ತೆಗೆಯುವುದಿಲ್ಲ ಎಂದು ಆಗ್ರಹಿಸಿದ್ದಾರೆ. ಕೆಲ ದಿನಗಳ ಹಿಂದೆ ಸ್ಥಳಿಯರು ಪ್ರತಿಭಟನೆ ನಡೆಸಿ ಕೆಲಸ ನಿಲ್ಲಿಸಲು ಆಗ್ರಹಿಸಿದ್ದೆವು. ಆಗ ಅವರು ಅದಕ್ಕೆ ಒಪ್ಪಿದ್ದರು. ಎಸಿ ಅವರು ಆ ಜಾಗವನ್ನ ಸರ್ವೇ ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ತೆಗೆದುಕೊಳ್ಳಿ ಎಂದು ಆದೇಶಿದ್ದರು. ಎಸಿ ಅವರ ಆದೇಶದಂತೆ ಸರ್ವೇ ಅಧಿಕಾರಿಗಳು ಬಂದಾಗ ಪ್ರಕರಣ ಕೋರ್ಟಿನಲ್ಲಿ ಇದೆ ಎಂದು ಸರ್ವೇ ಮಾಡಲು ಬಿಟ್ಟಿಲ್ಲ ಎಂದು ಸ್ಥಳಿಯರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಸರ್ವೇ ಅಧಿಕಾರಿಗಳು ಹೋದ ಕೂಡಲೇ ಮರುದಿನವೇ ಶೌಚ ಗುಂಡಿಯನ್ನ ತೆಗೆದಿರುತ್ತಾರೆ. ಈ ಜೊತೆಗೆ ನಾಲ್ಕು ಎಕರೆ ಕುಳುವಾಡಿಕೆ ಜಮೀನಿನಲ್ಲಿ ಈಗಾಗಲೇ ಮನೆ ಕಟ್ಟಿಕೊಂಡು ವಾಸವಿದ್ದಾರೆ. ಅದೇ ಜಾಗದಲ್ಲಿ ಅವರ ತಂದೆಗೆ ಮತ್ತೊಂದು ಮನೆ ಕಟ್ಟಿಕೊಡಲು ಮುಂದಾಗಿದ್ದಾರೆ. ಆದರಿಂದ ಗ್ರಾಮದ ಎಲ್ಲರೂ ಚರ್ಚೆ ನಡೆಸಿ, ಹಳ್ಳಿಯಲ್ಲಿ ಸಾರಾಕಿಸಿ ಗ್ರಾಮ ಪಂಚಾಯಿತಿ ಬಾಗಿಲು ಹಾಕಲು ತೀರ್ಮಾನಿಸಿದ್ದೇವೆ. ಎರಡೂ ಜಾಗವನ್ನ ಸಂಪೂರ್ಣ ಬಿಡುಗಡೆಗೊಳಿಸುವವರೆಗೂ ಗ್ರಾಮ ಪಂಚಾಯಿತಿಯ ಬೀಗ ತೆಗೆಯುವುದಿಲ್ಲ, ಯಾವುದೇ ಕೆಲಸ ಮಾಡಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆಗೆ ಮುಂದಾಗಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!