ಆಶ್ರಯ ಮನೆ ಹೆಸರಲ್ಲಿ ಗೋಲ್ಮಾಲ್
1 min readಚಿಕ್ಕಮಗಳೂರು : ಕಲ್ದೊಡ್ಡಿಯ ಇಂದಿರಗಾಂಧಿ ಬಡಾವಣೆಯಲ್ಲಿ ಆಶ್ರಯ ಮನೆ ಕೊಡಿಸುವುದಾಗಿ ನಂಬಿಸಿ ಅಮಾಯಕರಿಂದ ದುಡ್ಡು ಕೀಳುವ ಜಾಲವೊಂದು ವ್ಯಾಪಕವಾಗಿ ನಗರದಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಹೇಳಿದರು.
ನಗರಸಭಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಆರು ತಿಂಗಳಲ್ಲಿ ಮಾಡಿರುವ ಕೆಲಸಗಳ ಬಗ್ಗೆ ಮಾಹಿತಿ ನೀಡಲು ನಗರಸಭೆಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಡೆದ ಸಭೆಯಲ್ಲಿ ಆಶ್ರಯ ಮನೆ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಗರಂ ಆದ ಅವರು, ಅಮಾಯಕರಿಗೆ ಆಶ್ರಯ ಮನೆ ಹೆಸರಿನಲ್ಲಿ ವಂಚಿಸುತ್ತಿದ್ದವರ ಮಾಹಿತಿ ಬಹಿರಂಗ ಪಡಿಸಿ ಹೆಚ್ಚಿನ ತನಿಖೆಗೆಗಾಗಿ ದೂರು ನೀಡುವುದಾಗಿ ಹೇಳಿದರಲ್ಲದೆ, ಸಾರ್ವಜನಿಕರು ಇಂತಹ ಜಾಲಗಳಿಂದ ಎಚ್ಚರಿಕೆಯಿಂದಿರುವಂತೆ ಹಾಗೂ ಯಾವೂದೇ ಅಕ್ರಮಗಳ ಸಂಶಯ ಕಂಡು ಬಂದಲ್ಲಿ ನಗರಸಭೆಗೆ ಮಾಹಿತಿ ನೀಡಬೇಕೆಂದು ಕೋರಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g