May 7, 2024

MALNAD TV

HEART OF COFFEE CITY

ದೊಡ್ಡಕೆರೆಗೆ ಬಾಗಿನ ಅರ್ಪಿಸಿದ ಸಿ.ಟಿ. ರವಿ

1 min read

ಚಿಕ್ಕಮಗಳೂರು : ದಶಕಗಳ ನಂತರ ಕೋಡಿ ಬಿದ್ದ ಐತಿಹಾಸಿಕ ಬೆಳವಾಡಿ ದೊಡ್ಡ ಕೆರೆಗೆ ಶಾಸಕ ಸಿ.ಟಿ. ರವಿ, ಸ್ವಾಮೀಜಿಗಳು ಹಾಗೂ ಗ್ರಾಮಸ್ಥರು ಬಾಗಿನ ಸಮರ್ಪನೆ ಮಾಡಿದರು.
ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿದ್ದ ನೂರಾರು ಎಕರೆಯ ವಿಸ್ತಾರದ ಬೆಳವಾಡಿ ದೊಡ್ಡ ಕೆರೆಯು ಹದಿನೈದು ವರ್ಷಗಳ ತುಂಬಿ ಕೋಡಿ ಬಿದ್ದ ಹಿನ್ನೆಲೆ ಬೆಳವಾಡಿ ದೊಡ್ಡ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಾಸಕ ಸಿ.ಟಿ. ರವಿ ಹಾಗೂ ಸ್ವಾಮೀಜಿಗಳು ಸೇರಿದಂತೆ ಗ್ರಾಮಸ್ಥರು ಸಂಭ್ರಮದಿಂದ ಭಾಗವಹಿಸಿ ಕೆರೆಗೆ ಬಾಗಿನ ಅರ್ಪಿಸಿದರು.
ಈ ವೇಳೆ ಮಾತನಾಡಿದ ಮಾತನಾಡಿದ ಶಾಸಕ ಸಿ.ಟಿ. ರವಿಯವರು ನನ್ನನ್ನು ಭಗೀರಥ ಎಂದು ಕರೆಯುತ್ತಿರುವಿರಿ, ಆದೆ ನಾನು ಭಗೀರಥನ ರೀತಿ ದೊಡ್ಡ ತಪಸ್ಸನ್ನು ಮಾಡಿಲ್ಲ. ಶಾಸಕನಾಗಿ ನೀವಿಟ್ಟ ನಂಬಿಕೆಯನ್ನು ಪ್ರಮಾಣಿಕವಾಗಿ, ಪರಿಶ್ರಮದಿಂದ ಮಾಡುವ ಕೆಲಸ ಮಾಡಿದ್ದೇನೆ. ನಾವು ಅಂದುಕೊಂಡ ರೀತಿ ಎಲ್ಲವು ಆಗಲಿಲ್ಲ. ಆದರೆ ಉದ್ದೇಶದಲ್ಲಿ ದುರುದ್ದೇಶ ಇರಲಿಲ್ಲ. ತಾತ್ಕಾಲಿಕವಾಗಿ ಲಿಪ್ಟ್ ಮೂಲಕ ನೀರು ಹರಿಸುವ ಕೆಲಸ ಮಾಡಿದ್ದು, ಶಾಶ್ವತ ಯೋಜನೆಗಾಗಿ ಸ್ಥಗಿತಗೊಂಡಿದ್ದ ರಣಘಟ್ಟದಿಂದ ನೀರು ತರಿಸುವ ಯೋಜನೆಗೆ 125 ಕೋಟಿ ಮಂಜೂರು ಮಾಡಿದ್ದು, ಜಿಲ್ಲೆಯ ಎಲ್ಲಾ ಕೆರೆಗಳಿಗೂ ಶಾಶ್ವತ ನೀರಾವರಿ ಕಲ್ಪಿಸುವ ಸಲುವಾಗಿ 1281 ಕೋಟಿ ವೆಚ್ಚದ ಯೋಜನೆಯನ್ನು ಮಂಜೂರು ಮಾಡಿಸಿ, ರಣಘಟ್ಟ ಸೇರಿದಂತೆ ಕೆಲವು ಯೋಜನೆಗಳು ಆರಂಭವಾಗಿದು ಕರಗಟ್ಟ ಯೋಜನೆಯ ಫಲವಾಗಿ ಬಾಗಿನ ಬಿಡುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!