ಗೋ ಬ್ಯಾಕ್ ಶೋಭಾ ಬೆನ್ನಲ್ಲೇ ಸಿ.ಟಿ ರವಿಗೆ ದಿಢೀರ್ ದೆಹಲಿ ಬುಲಾವ್
1 min read
ಗೋ ಬ್ಯಾಕ್ ಶೋಭಾ ತೀವ್ರಗೊಂಡ ಬೆನ್ನಲ್ಲೇ ಮಾಜಿ ಶಾಸಕ ಸಿ.ಟಿ ರವಿಗೆ ದೆಹಲಿಯಿಂದ ದಿಢೀರ್ ಬುಲಾವ್ ಬಂದಿದೆ. ಇಂದು ಸಂಜೆ ಬೆಂಗಳೂರಿಗೆ ತೆರಳಲಿರುವ ರವಿ ನಾಳೆ ದೆಹಲಿಗೆ ವಿಮಾನದ ಮೂಲಕ ಪ್ರಯಾಣ ಬೆಳೆಸಲಿದ್ದಾರೆ. ಈ ಬಗ್ಗೆ ಕೇಳಿದಾಗ ನನಗಾಗಿ ಏನನ್ನು ಕೇಳಿಕೊಂಡ ರಾಜಕಾರಣ ಮಾಡಲ್ಲ ಎಂದು ರವಿ ಪ್ರತಿಕ್ರಿಯಿಸಿದ್ದಾರೆ.
ಲೋಕಸಭಾ ಚುನಾವಣೆ ಸಂಬಂಧ ಬಿಜೆಪಿ ಎರಡನೇ ಪಟ್ಟಿ ಕಸರತ್ತು ತೀವ್ರಗೊಂಡಿರುವ ನಡುವೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಗೋ ಬ್ಯಾಕ್ ಶೋಭಾ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಶಾಸಕ ಸಿ.ಟಿ ರವಿಗೆ ದಿಢೀರ್ ದೆಹಲಿಗೆ ಬರಲು ಕರೆ ಬಂದಿದೆ. ಕೇಂದ್ರ ವರಿಷ್ಟರು ಬುಲಾವ್ ನೀಡಿರುವುದು ತೀವ್ರ ಕುತೂಹಲ ಮೂಡಿಸಿದ್ದು ಟಿಕೆಟ್ ಫೈಟ್ ತಾರಕಕ್ಕೇರಿರುವ ಹೊತ್ತಿನಲ್ಲಿ ರವಿ ಭೇಟಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ರವಿ ನಾನು ಆಗಾಗ್ಗೆ ದೆಹಲಿಗೆ ಹೋಗುತ್ತಿರುತ್ತೇನೆ , ಲೋಕಸಭಾ ಟಿಕೆಟ್ ಪಾರ್ಲಿಮೆಂಟರಿ ಬೋರ್ಡ್ ನಿರ್ಣಯದ ಆಧಾರದಲ್ಲಿ ಪಟ್ಟಿ ಬಿಡುಗಡೆ ಆಗಲಿದೆ ನನಗಾಗಿ ಕೇಳಿಕೊಂಡು ರಾಜಕಾರಣ ಮಾಡಿಲ್ಲ ಮಾಡುವುದೂ ಇಲ್ಲ ಎಂದಿದ್ದಾರೆ. ನನ್ನ ಸ್ಪರ್ಧೆ ಬಗ್ಗೆ ತೀರ್ಮಾನ ಮಾಡೋರು ಪಕ್ಷದ ಮುಖಂಡರು ಅವರೇ ಹೇಳಬೇಕು ಎಂದು ಸಿ.ಟಿ ರವಿ ಹೇಳಿದ್ದಾರೆ. ಆದರೆ ದೆಹಲಿ ವರಿಷ್ಟರು ಗೋ ಬ್ಯಾಕ್ ಗೆ ಪರೋಕ್ಷ ಬೆಂಬಲ ನೀಡಿ ಪಕ್ಷದ ಲಕ್ಷ್ಮಣ ರೇಖೆ ಮೀರುತ್ತಿರುವ ಬಗ್ಗೆ ತಿಳುವಳಿಕೆ ಹೇಳಲು ಕರೆಸಿಕೊಳ್ಳಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಎಲ್ಲದಕ್ಕೂ ಉತ್ತರ ಬುಧವಾರದ ವೇಳೆಗೆ ಹೊರಬೀಳಲಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g