April 28, 2024

MALNAD TV

HEART OF COFFEE CITY

ಯಡಿಯೂರಪ್ಪರನ್ನು ಹಾಡಿ ಹೊಗಳಿದ ಶಾಸಕ ಎಚ್.ಡಿ ತಮ್ಮಯ್ಯ

1 min read

ಚಿಕ್ಕಮಗಳೂರು: ಮಾಜಿ ಸಿಎಂ ಯಡಿಯೂರಪ್ಪರನ್ನು ಚಿಕ್ಕಮಗಳೂರು ಶಾಸಕ ಎಚ್.ಡಿ ತಮ್ಮಯ್ಯ ಹೊಗಳುವ ಮೂಲಕ ಮತ್ತೊಮ್ಮೆ ಬಿಜೆಪಿ ಮುಖಂಡರ ನಿಕಟತೆ ಪ್ರದರ್ಶಿಸಿದ್ದಾರೆ. ಮುಸ್ಲಿಮರೂ ಸಾರಾಸಗಟಾಗಿ ಬಿ.ಎಸ್ ವೈಗೆ ಮತ ಹಾಕುತ್ತಾರೆ ಎಂದು ಕೊಂಡಾಡಿದ್ದಾರೆ.

ಮಾಜಿ ಸಿ.ಎಂ ಯಡಿಯೂರಪ್ಪರನ್ನ ಹಾಡಿ ಹೊಗಳಿರುವ ಚಿಕ್ಕಮಗಳೂರು ಶಾಸಕ ಎಚ್.ಡಿ ತಮ್ಮಯ್ಯ ಬಿಜೆಪಿ ನಾಯಕರ ಜೊತೆಗಿನ ತಮ್ಮ ನಿಷ್ಠೆ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ ಎಂದಿಗೂ ಯಾವ ಧರ್ಮವನ್ನ ವಿರೋಧಿಸಲಿಲ್ಲ ಎಂದು ಚಿಕ್ಕಮಗಳೂರು ನಗರದಲ್ಲಿ ನಡೆದ ಉರ್ದು ಸಮ್ಮೇಳನದಲ್ಲಿ ಬಿಎಸ್.ವೈ.ರನ್ನ ಹಾಡಿ ಹೊಗಳಿದ್ದಾರೆ. 

ಶಿಕಾರಿಪುರದಲ್ಲಿ ಅನಭಿಶಕ್ತ ದೊರೆ ಅಂದ್ರೆ ಅದು ಬಿ.ಎಸ್ ಯಡಿಯೂರಪ್ಪ, ದೇಶದಲ್ಲಿ ಮುಸ್ಲಿಮರು ಸಾರಾಸಗಟಾಗಿ ಬಿಜೆಪಿಗೆ ಮತ ಹಾಕೋದು ಶಿಕಾರಿಪುರದಲ್ಲಿ ಮಾತ್ರ ಎಂದು ಹೇಳಿದ ತಮ್ಮಯ್ಯ, ಕೆಜೆಪಿ ಕಟ್ಟಿದಾಗ ಮಸೀದಿಯಲ್ಲಿ ಟೋಪಿ ಹಾಕಿದಾಗ ಆ ಫೋಟೋ ಹಾಕಿ ತುಂಬಾ ಕಿಂಡಲ್ ಮಾಡಿದ್ರು ಎಂದು ಹೇಳಿದ ಎಚ್.ಡಿ ತಮ್ಮಯ್ಯ ವ್ಯಕ್ತಿ ತನ್ನ ಧರ್ಮದ ಜೊತೆ ಎಲ್ಲಾ ಧರ್ಮವನ್ನ ಪ್ರೀತಿಸಬೇಕು ಅಂತರವನ್ನು ಎಲ್ಲಾ ಸಂದರ್ಭದಲ್ಲೂ ಎಲ್ಲರೂ ಒಪ್ಪುತ್ತಾರೆ ಎಂದು ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ಉರ್ದು ಸಮ್ಮೇಳನದಲ್ಲಿ ಹೇಳಿದ್ದಾರೆ. 

 

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!