ರಾಜ್ಯದ ಜನರಿಗೆ ಸರ್ಕಾರದಿಂದ ಲೋಡ್ ಶೆಡ್ಡಿಂಗ್ ಗ್ಯಾರೆಂಟಿ ಜಾರಿ
1 min read
ಸದ್ದಿಲ್ಲದೇ ರಾಜ್ಯ ಸರ್ಕಾರ ಲೋಡ್ ಶೆಡ್ಡಿಂಗ್ ಜಾರಿಗೊಳಿಸಿದೆ. ಪರೀಕ್ಷೆಗಳು ನಡೆಯುತ್ತಿರುವ ಹೊತ್ತಿನಲ್ಲಿ ಗಂಟೆಗಟ್ಟಲೇ ವಿದ್ಯುತ್ ಸಂಪರ್ಕ ನಿಲ್ಲಿಸಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಮುಂದೆ ದಿನಕ್ಕೆ ಒಂದು ತಾಸು ಪವರ್ ಕಟ್ ಉಚಿತ ಘೋಷಣೆ ಆಗಿದೆ.
ರಾಜ್ಯದಲ್ಲಿ ಭೀಕರ ಬರಗಾಲ ತಾಂಡವ ನೃತ್ಯ ಆರಂಭಿಸುತ್ತಿದ್ದಂತೆ ಜನ ಸಾಮಾನ್ಯರ ಮೇಲೆ ಅದರ ಪರಿಣಾಮ ಬೀರಲಾರಂಭಿಸದೆ. ಕಳೆದ ನಾಲ್ಕು ದಿನಗಳ ಹಿಂದಿನಿಂದ ಅಧಿಕೃತವಾಗಿ ಲೋಡ್ ಶೆಡ್ಡಿಂಗ್ ಜಾರಿಯಾಗಿದ್ದು ಇದರ ಬಿಸಿ ನೇರ ಜನರಿಗೆ ತಟ್ಟುತ್ತಿದೆ. ಇನ್ನು ಮುಂದೆ ಪ್ರತಿದಿನ ಒಂದು ಗಂಟೆ ವಿದ್ಯುತ್ ಕಡಿತ ಗ್ಯಾರೆಂಟಿಯಾಗಿದ್ದು, ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯುತ್ತಿರುವ ವೇಳೆಯಲ್ಲಿ ಪವರ್ ಕಟ್ ವಿದ್ಯಾರ್ಥಿಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಜೊತೆಗೆ ಎಸ್ಎಸ್ಎಲ್.ಸಿ ಪರೀಕ್ಷೆಗಳು ಇದೇ ತಿಂಗಳ 25 ರಿಂದ ಆರಂಭಗೊಳ್ಳುತ್ತಿದ್ದು ಮಕ್ಕಳ ಭವಿಷ್ಯದ ಜೊತೆ ಮೆಸ್ಕಾಂ ಚೆಲ್ಲಾಟ ಶುರುಮಾಡಿದೆ. ಅದರಲ್ಲೂ ಸಂಜೆ ವೇಳೆಯೇ ಪವರ್ ಕಟ್ ಮಾಡುತ್ತಿರುವುದು ಸಾರ್ವಜನಿಕರಲ್ಲದೆ ಉದ್ಯಮಿಗಳಿಗೂ ಬಿಸಿ ತಟ್ಟಲಿದೆ.
ಸಂಜೆ ವೇಳೆ ವಿಪರೀತ ಲೋಡ್ ಇರುವ ಕಾರಣ ಮುಗುಳುವಳ್ಳಿ ಫೀಡರ್ ನಿಂದ ಹೊರಹೊಮ್ಮುವ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.
ಅದರಲ್ಲೂ ಗ್ರಾಮಾಂತರ ಪ್ರದೇಶಗಳಲ್ಲಿ ದಿನಕ್ಕೆ ಕೇವಲ 4 ಗಂಟೆ ಮಾತ್ರ ಥ್ರೀ ಫೇಸ್ ಲಭ್ಯವಿದ್ದು ಸಿಂಗಲ್ ಫೇಸ್ ಮಾತ್ರ ಎಂಬಂತೆ ಆಗಿದೆ. ರಾಜ್ಯ ಸರ್ಕಾರ ಗ್ಯಾರೆಂಟಿಗಳ ಘೋಷಣೆ ಬೆನ್ನಲ್ಲೇ ವಿದ್ಯುತ್ ಕಡಿತ ಮಾಡಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದು ಬರಗಾಲ ಆರಂಭದಲ್ಲೇ ಉಚಿತ ವಿದ್ಯುತ್ ಘೋಷಣೆ ಮಾಡಿ ಪವರ್ ಕಟ್ ಮಾಡುವ ಮೂಲಕ ಜನರ ಕೆಂಗಣ್ಣಿಗೆ ಕಾರಣವಾಗಿದೆ
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g