ಶಂಕರಪುರದಲ್ಲಿ ಉಚಿತ ಆರೋಗ್ಯ ತಪಾಸಣೆ
1 min readಚಿಕ್ಕಮಗಳೂರು: ನಗರದ ಶಂಕರಪುರ ಬಡಾವಣೆಯ ಡಾ.ಬಿ.ಆರ್.ಅಂಬೇಡ್ಕರ್ ಶಾಲೆಯಲ್ಲಿ ಜಾತ್ಯತೀತ ಜನತಾದಳ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಮುಖಂಡ ಬಿ.ಎಂ.ತಿಮ್ಮಶೆಟ್ಟಿ ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಶುಕ್ರವಾರ ಮಾತನಾಡಿ,ಸಾಮಾನ್ಯ ಕಾಯಿಲೆ ತಜ್ಞರು, ಮೂಳೆ, ಕಣ್ಣು, ಸ್ತ್ರೀರೋಗ ತಜ್ಞರು, ಮಕ್ಕಳ ಚಿಕಿತ್ಸಾ ತಜ್ಞರು, ದಂತರೋಗ ತಜ್ಞರು,ಕವಿ,ಮೂಗು, ಗಂಟಲು ತಜ್ಞರು ಪರೀಕ್ಷಿಸಲಿದ್ದಾರೆ. ಇಸಿಜಿ, ಬಿಪಿ, ಸಕ್ಕರೆ ಕಾಯಿಲೆಗಳನ್ನು ಪರೀಕ್ಷಿಸಲಾಗುವುದು ಎಂದು ಹೇಳಿದರು.
ರೋಗ ಕಂಡು ಬಂದಲ್ಲಿ ಉಚಿತ ಔಷಧಿ ಮತ್ತು ಮಾತ್ರೆಗಳನ್ನು ನೀಡಲಾಗುವುದು. ನೇತ್ರ ತಪಾಸಣೆ ಬಳಿಕ ಅವಶ್ಯಕತೆ ಇದ್ದವರಿಗೆ ಉಚಿತ ಕನ್ನಡಕ ವಿತರಿಸಲಾಗುವುದು, ಈಗಾಗಲೇ ಬಯಲು ಪ್ರದೇಶದಲ್ಲಿ ಒಟ್ಟು 45 ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸುವರು. ಸರ್ಜನ್ ಡಾ.ಎಂ. ಶಶಿಧರ್, ಕ್ರಿಸ್ಟಲ್ ಡೆಯೋಗ್ನೊಸ್ಟಿಕ್ ಕೇಂದ್ರದ ನಿರ್ದೇಶಕ ಆರ್.ಪ್ರವೀಣ್, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ಕುಮಾರ್ ಉಪಸ್ಥಿತರಿರುವರು ಎಂದರು.ಪಕ್ಷದ ಜಿಲ್ಲಾ ವಕ್ತಾರ ಹೊಲದಗದ್ದೆಗಿರೀಶ್, ಪಕ್ಷದ ಪರಿಶಿಷ್ಟಜಾತಿ ವಿಭಾಗದ ಜಿಲ್ಲಾಧ್ಯಕ್ಷ ದೇವಿಪ್ರಸಾದ್, ನಗರಸಭೆ ಸದಸ್ಯ ಗೋಪಿ,ಮುಖಂಡರಾದ ಹರಿಗುಪ್ತ, ಶಿವಕುಮಾರ್ ಇದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g