May 15, 2024

MALNAD TV

HEART OF COFFEE CITY

ದೋಷಮುಕ್ತನಾಗಿ ಇದೇ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತೇನೆ_ಕೆ.ಎಸ್ ಈಶ್ವರಪ್ಪ

1 min read

 

ಕಡೂರು: ದೋಷ ಮುಕ್ತವಾಗಿ ಹೊರಬಂದು ಇದೇ ಇಲಾಖೆಯಲ್ಲಿ ಸೇವೆ ಸಲ್ಲಿಸಲಿದ್ದೇನೆ ಎಂಬ ವಿಶ್ವಾಸ ನನಗಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಶುಕ್ರವಾರ ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಕಡೂರು ನಲ್ಲಿ ಕಾರ್ಯಕರ್ತರು ತಯಾರಿಸಿದ್ದ ಭೋಜನ ಸವಿದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಿಪಕ್ಷಗಳ ವೃಥಾ ಆರೋಪದಿಂದ ಪಕ್ಷಕ್ಕೆ ಮುಜುಗರ ಆಗುವುದನ್ನು ತಡೆಯಲು ರಾಜೀನಾಮೆ ನೀಡುತ್ತಿದ್ದೇನೆ, ಕೇವಲ ಒಂದೆರಡು ತಿಂಗಳಲ್ಲಿ ಆರೋಪ ಮುಕ್ತನಾಗಿ ಜನಸೇವೆಗೆ ಮರಳಲಿದ್ದೇನೆ ಎಂದರು.ಷಡ್ಯಂತ್ರದ ಹಿಂದಿನ ಸತ್ಯ ಹೊರಬರಬೇಕಿದೆ, ಯಾರೋ ಮಾಡಿದ ಷಡ್ಯಂತ್ರದಿಂದ ಸಂತೋಷ ಪಾಟಿಲ್ ಹತ್ಯೆ ಆಯಿತೋ ಅಥವಾ ಆತ್ಮ ಹತ್ಯೆಯೋ ಎಂಬುದು ತನಿಖೆಯಿಂದ ತಿಳಿಯುತ್ತದೆ, ನಾನು ತಪ್ಪು ಮಾಡಿದ್ದರೆ ನನ್ನ ಮನೆದೇವರು ಶಿಕ್ಷಿಸಲಿ ಎಂದರು.

 

ವರ್ಕ್ ಆರ್ಡರ್ ನೀಡುವ ಮುನ್ನವೇ ಕಾಮಗಾರಿ ಮಾಡುವ ವ್ಯವಸ್ಥೆ ಬಂದರೆ ಸರಿಯಾದೀತೆ? ಸಿದ್ದರಾಮಯ್ಯ, ಕುಮಾರಸ್ವಾಮಿ ಅಥವಾ ಡಿ.ಕೆ.ಶಿವಕುಮಾರ್ ಅವರ ಕಾಲದಲ್ಲಿಯೂ ಇದೇ ರೀತಿಯಾಗಿತ್ತೆ? ಹಾಗೆ ಮಾಡಲು ಕರ್ನಾಟಕ ಸರ್ಕಾರ ಅಪ್ಪನ ಮನೆ ಆಸ್ತಿಯೇ ಎಂದು ಹರಿಹಾಯ್ದರು.ನನ್ನ ರಕ್ತದ ಕಣಕಣದಲ್ಲೂ ಹಿಂದುತ್ವ ಇದೆ ಹಿಂದುತ್ವಕ್ಕೆ ತೊಂದರೆ ಆದರೆ ಪ್ರಾಣಕೊಡಲೂ ಸಿದ್ಧ, ಕೊಲೆ ಮಾಡುವಂತಹ ಹೀನ ಸಂಸೃತಿನ್ನು ಹಿಂದೂ ಧರ್ಮದಲ್ಲಿ ಎಲ್ಲಿಯೂ ಭೋಧಿಸಿಲ್ಲ, ಕೊಲೆ ಆಗಿರುವವರು ಹೆಚ್ಚಿನವರು ಹಿಂದೂಗಳೇ ಆಗಿದ್ಜಾರೆ ಅವರೆಲ್ಲರ ಸಾವಿಗೂ ನ್ಯಾಯ ದೊರತಿಸಿಕೊಡುವ ಪ್ರಯತ್ನ ನಡೆಯುತ್ತಿದೆ ಎಂದರು.ನಾನು ಒಬ್ಬಂಟಿ ಅಲ್ಲ ನನ್ನೊಂದಿಗೆ ಲಕ್ಷಾಂತರ ಸಂಗೊಳ್ಳಿ ರಾಯಣ್ಣರಿದ್ದಾರೆ, ರಾಷ್ಟ್ರ ಭಕ್ತಿ ಹೊಂದಿರುವುದು ಅಪರಾಧವಲ್ಲ ರಾಷ್ಟ್ರ ಭಕ್ತರ ವಿರುದ್ಧ ಹೋರಾಟ ಮಾಡುವವರು ತಪ್ಪಿತತ್ಥರಾಗಿ ಶಿಕ್ಷೆ ಅನುಭವಿಸುವ ಕಾಲ ದೂರವಿಲ್ಲ ಎಂದರು.

 

ಹಿಂದುತ್ವ ವಿಕೋಧಿ ಧೋರಣೆ ಇಟ್ಟುಕೊಂಡು ಮುಂದಿನ ಚುನಾವಣೆಯಲ್ಲಿ ಜಯಿಸುವ ಆಸೆಯೊಂದಿಗೆ ವಿರೋಧ ಪಕ್ಷಗಳು ಇವೆ, ಇದೇ ಅವರ ಕೊರಳ ಕುಣಿಕೆ ಆಗಿ ಧೂಳೀಪಟ ಆಗುವುದರಲ್ಲಿ ಸಂಶಯವೇ ಇಲ್ಲ. 150ಕ್ಕೂ ಹೆಚ್ಚು ಸ್ಥಾನವನ್ನು ಗೆಲ್ಲುವ ನಿರೀಕ್ಷೆ ನಮ್ಮ ಪಕ್ಷಕ್ಕಿದೆ ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!