May 14, 2024

MALNAD TV

HEART OF COFFEE CITY

ಕೋವಿಡ್ ನಿ‌ಯಮ‌ ಮರೆತು ಕಾಫಿನಾಡಲ್ಲಿ ಪ್ರವಾಸಿಗರ ಮೋಜು- ಮಸ್ತಿ

1 min read

ಚಿಕ್ಕಮಗಳೂರು. ದೇಶ ಕೊರೋನಾ ಮೂರನೇ ಎದುರಿಸಲು ಸಜ್ಜಾಗುತ್ತಿದೆ. ಆದರೆ, ಕಾಫಿನಾಡಿಗೆ ಬರ್‍ತಿರೋ ಪ್ರವಾಸಿಗರು ಮಾತ್ರ ಕೊರೋನಾಗೂ ನಮಗೂ ಸಂಬಂಧವೇ ಇಲ್ಲದಂತೆ ತಮ್ಮಗಳ ಜೊತೆ ಇತರರಿಗೂ ಸಮಸ್ಯೆ ತಂದೊಡ್ಡುತ್ತಿದ್ದಾರೆ.

ಜಿಲ್ಲೆಯಲ್ಲಿ ಸಮೃದ್ಧ ಮಳೆಯಾಗಿರೋದ್ರಿಂದ ಗಿರಿಶಿಖರಗಳು ಪ್ರವಾಸಿಗರನ್ನ ಕೈಬಿಸಿ ಕರೆಯುತ್ತಿದೆ. ಜಿಲ್ಲೆಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಆದರೆ, ಬಂದಂತಹಾ ಪ್ರವಾಸಿಗರು ಮುಖಕ್ಕೆ ಮಾಸ್ಕ್ ಇಲ್ಲದೆ, ಸಾಮಾಜಕ ಅಂತರ ಕಾಪಾಡಿಕೊಳ್ಳದೆ ಪ್ರವಾಸಿ ತಾಣಗಳಲ್ಲಿ ಮೋಜುಮಸ್ತಿಯಲ್ಲಿ ತೊಡಗಿದ್ದಾರೆ. ಚೆಕ್‌ಪೋಸ್ಟ್‌ನಲ್ಲಿ ಪ್ರತಿಯೊಬ್ಬರಿಗೂ ತಿಳಿ ಹೇಳಿದರೂ ಗಿರಿಭಾಗದಲ್ಲಿ ಮತ್ತದೇ ಬೇಜಾವಾಬ್ದಾರಿ ತೋರುತ್ತಿದ್ದಾರೆ. ಗಿರಿ ಭಾಗದಲ್ಲಿ ಪೊಲೀಸರು ಕೂಡ ಪ್ರತಿನಿತ್ಯ ನೂರಾರು ಜನರಿಗೆ ದಂಡ ಹಾಕುತ್ತಿದ್ದಾರೆ. ಆದರೂ ಜನ ಬುದ್ಧಿ ಕಲಿತಿಲ್ಲ. ಕಾಫಿನಾಡಲ್ಲಿ ನಿತ್ಯ 1000 ಕೊರೋನಾ ಕೇಸ್ ಬರುತ್ತಿರೋದು ಜಿಲ್ಲಾಡಳಿತ ಹಾಗೂ ಜನಸಾಮಾನ್ಯರಿಗೂ ತಲೆನೋವು ತರಿಸಿದೆ. ಈ ಮಧ್ಯೆ ಪ್ರವಾಸಿಗರ ಬೇಜಾವಾಬ್ದಾರಿ ಮತ್ತಷ್ಟು ಆತಂಕ ತರಿಸಿದೆ. ಹಾಗಾಗಿ, ಜಿಲ್ಲೆಯ ಜನ ಜಿಲ್ಲೆಗೆ ಪ್ರವಾಸಿಗರನ್ನ ನಿಷೇಧಿಸುವಂತೆ ಆಗ್ರಹಿಸಿದ್ದಾರೆ. ಮುಳ್ಳಯ್ಯನಗಿರಿಯಲ್ಲಿ ಪ್ರವಾಸಿಗರ ಬೇಜಾವಾಬ್ದಾರಿಗೆ ಪೊಲೀಸರ ದಂಡಪ್ರಯೋಗ ನಡೆಸುತ್ತಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!