ಕಾಫಿನಾಡಲ್ಲಿ ಬಾಂಗ್ಲಾ ನಿವಾಸಿಗಳ ಆತಂಕ
1 min readಚಿಕ್ಕಮಗಳೂರು : ಇವ್ರನ್ನ ನೋಡಿ… ಇವರು ಯಾರೂ ನಮ್ಮವರಲ್ಲ. ಎಲ್ಲರೂ ಬಾಂಗ್ಲಾ ನಿವಾಸಿಗಳು. ಯಾರ ಬಳಿಯೂ ಆಧಾರ್ ಕಾರ್ಡ್ ಇಲ್ಲ. ಓರ್ವನ ಬಳಿ ಮಾತ್ರ ಪಾನ್ ಕಾರ್ಡ್ ಇದೆ. ಅದನ್ನ ಬ್ಯಾಂಕಿAಗ್ ಕೆಲಸಕ್ಕೆ ಬಿಟ್ಟು ಬೇರೆಯದ್ದಕ್ಕೆ ಉಪಯೋಗಿಸುವಂತಿಲ್ಲ. ಆದ್ರೆ, ಇವ್ರು ನಾವೆಲ್ಲಾ ಅಸ್ಸಾಂನವರು ಎಂದು ಹೇಳುತ್ತಾರೆ. ಅಸ್ಸಾಂನಲ್ಲಿ ಎಲ್ಲಿ ಎಂದು ಕೇಳಿದ್ದರೆ ಯಾರಿಂದಲೂ ಸ್ಪಷ್ಟ ಉತ್ತರ ಸಿಗಲ್ಲ. ಎಲ್ಲಿ ಅಸ್ಸಾಂನಲ್ಲಿ ಎಲ್ಲಿ ವಾಸವಿದ್ದೇವೆ ಅನ್ನೋದು ಗೊತ್ತಿಲ್ಲ. ಇವರೆಲ್ಲಾ ನಗರದಲ್ಲಿ ಓಡಾಡುವಾಗ ಬಜರಂಗದಳ ಕಾರ್ಯಕರ್ತರಿಗೆ ಸಿಕ್ಕಿದ್ದಾರೆ. ಬಜರಂಗದಳ ಕಾರ್ಯಕರ್ತರು ಕೇಳಿದ ಯಾವ ಪ್ರಶ್ನೆಗೂ ಸಮಪರ್ಕವಾದ ಉತ್ತರ ಸಿಕ್ಕಿಲ್ಲ. ಆಗ ಎಲ್ಲರನ್ನೂ ಪೊಲೀಸರಿಗೆ ಒಪ್ಪಿಸಿ ಎಲ್ಲರನ್ನೂ ಗಡಿಪಾರು ಮಾಡುವಂತೆ ಆಗ್ರಹಿಸಿದ್ದಾರೆ. ಇನ್ನು ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ ಸುಮಾರು ಐದು ಸಾವಿರಕ್ಕೂ ಅಧಿಕ ಅಕ್ರಮ ಬಾಂಗ್ಲಾ ನಿವಾಸಿಗಳು ಕಾಫಿತೋಟದಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಅವರಿಂದ ಮುಂದೊAದು ದಿನ ದೊಡ್ಡ ಅನಾಹುತ ಸಂಭವಿಸೋ ಮೊದಲು ಸರ್ಕಾರ ಕೂಡಲೇ ಅವರನ್ನ ಗಡಿಪಾರು ಮಾಡುವಂತೆ ಆಗ್ರಹಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g