ಎಂ.ಜಿ. ಪಾರ್ಕ್ ಶುಲ್ಕ ಹೆಚ್ಚಳಕ್ಕೆ ಜಿಲ್ಲಾಡಳಿತ ಸಜ್ಜು
1 min readಚಿಕ್ಕಮಗಳೂರು : ರತ್ನಗಿರಿ ಬೋರೆಯಲ್ಲಿನ ಮಹಾತ್ಮಾಗಾಂಧಿ ಉದ್ಯಾನವನದ ಸಮಗ್ರ ಅಭಿವೃದ್ಧಿಗೆ ಮಹಾತ್ಮಾಗಾಂಧಿ ಉದ್ಯಾನವನದ ಪ್ರಗತಿ ಪರಿಶೀಲನೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಹೇಳಿದರು.
ಈ ಬಗ್ಗೆ ಮಲ್ನಾಡ್ ಟಿವಿಯೊಂದಿಗೆ ತಮ್ಮ ಕಛೇರಿಯಲ್ಲಿ ಮಾತನಾಡಿದ ಅವರು ಕಳೆದ ವರ್ಷ ಉದ್ಯಾನವನ ನಿರ್ವಹಣೆಗೆ 1 ಲಕ್ಷದ 47 ಸಾವಿರ ರೂಪಾಯಿ ಖರ್ಚು ಭರಿಸಿದ್ದು, ಕೇವಲ 2 ಲಕ್ಷದ 16 ಸಾವಿರ ರೂಪಾಯಿ ಆದಾಯವಾಗಿದೆ. ಆದ್ದರಿಂದ ಉದ್ಯಾನವನದ ವ್ಯವಸ್ಥಿತ ನಿರ್ವಹಣೆ ಹಾಗೂ ಅಭಿವೃದ್ಧಿಯ ದೃಷ್ಟಿಯಿಂದ ಪ್ರವೇಶ ಶುಲ್ಕ ಹೆಚ್ಚಳ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ರವೇಶ ಶುಲ್ಕ 2018ರಲ್ಲಿ ಪರಿಷ್ಕರಣೆಗೊಂಡಿದ್ದು, ಮಕ್ಕಳಿಗೆ 10 ರೂಪಾಯಿ ಹಾಗೂ ವಯಸ್ಕರಿಗೆ ರೂ. 20 ನಿಗದಿಯಾಗಿತ್ತು. ಇದೀಗ ಪ್ರವೇಶ ಶುಲ್ಕ ಮಕ್ಕಳಿಗೆ 20 ರೂಪಾಯಿ ಮತ್ತು ವಯಸ್ಕರಿಗೆ ರೂ. 40 ದರವನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಅಲ್ಲದೆ ಪುಟಾಣಿ ರೈಲಿನ ಇಂಜಿನ್ ಪದೇ ಪದೇ ರಿಪೇರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ 5 ಲಕ್ಷ ರೂಪಾಯಿ ವೆಚ್ಚದಲ್ಲಿ ಗುಣಮಟ್ಟದ ಇಂಜಿನ್ ಅನ್ನು ಖರೀದಿಸಲು ಅಧಿಕಾರಿಗಳಿಗೆ ಅವರು ಸೂಚಿಸಿದರು. ಹಾಗೂ ಪುಟಾಣಿ ರೈಲಿನ ಟಿಕೆಟ್ ದರವು ಬಹಳ ಕಡಿಮೆಯಿದ್ದು, ದರವನ್ನು ಹೆಚ್ಚಿಸಲು ಸಮಿತಿಯ ಸದಸ್ಯರೊಡನೆ ಚರ್ಚಿಸಲಾಗಿದೆ ಎಂದು ಹೇಳಿದರು.
ಸಂಗೀತ ಕಾರಂಜಿ, ವೀಕ್ಷಣಾ ಗ್ಯಾಲರಿ ಹಾಗೂ ಹಿರಿಯ ನಾಗರೀಕರಿಗೆ ವಿಶ್ರಾಂತಿ ಕೊಠಡಿಗಳ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ, ಆಗಸ್ಟ್ 15 ರೊಳಗೆ ಅವುಗಳಿಗೆ ಚಾಲನೆ ನೀಡಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಎಲ್ಲಾ ಕಾಮಗಾರಿಗಳು ಪೂರ್ಣಗೊಂಡ ನಂತರ ಉದ್ಯಾನವನದಲ್ಲಿರುವ ಎರಡು ಅಂಗಡಿಗಳಿಗೆ ಹೊಸದಾಗಿ ಟೆಂಡರ್ ಕರೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಾರದ ಕೊನೆಯ ಎರಡು ದಿನಗಳಲ್ಲಿ ಉದ್ಯಾನವನದಲ್ಲಿ ಫೋಟೋಶೂಟ್ಗೆ ಅವಕಾಶ ಕಲ್ಪಿಸಬಾರದು ಹಾಗೂ ಇನ್ನುಳಿದ ದಿನಗಳಲ್ಲಿ ಒಂದು ಕ್ಯಾಮೆರಾ ಛಾಯಾಚಿತ್ರಣಕ್ಕೆ ರೂ.500 ಹಾಗೂ ಫೋಟೋಶೂಟ್ಗೆ ರೂ.1000 ದರ ನಿಗದಿಪಡಿಸಲು ಸಭೆಯಲ್ಲಿ ತೀರ್ಮಾನಿಸಿದ್ದು, ಪುಟಾಣಿ ರೈಲು ಚಾಲಕರ ವೇತನ ಮಾಹೆಯಾನ ರೂ.6500 ಇದ್ದು, ಬೇಡಿಕೆಯಂತೆ ಅದನ್ನು ಹೆಚ್ಚಿಸಿ ದಿನಗೂಲಿ ರೂಪದಲ್ಲಿ ದಿನಕ್ಕೆ ರೂ.350 ನೀಡುವಂತೆ ಅವರು ಆದೇಶಿಸಲಾಗಿದೆ. ಶಾಲಾ ಪ್ರವಾಸದ ವೇಳೆಯಲ್ಲಿ ಖಾಸಗಿ ಶಾಲಾ ಮಕ್ಕಳಿಗೆ ರೂ.5 ಪ್ರವೇಶ ದರ ನಿಗದಿಪಡಿಸಲು ಹಾಗೂ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಲು ಚಿಂತಿಸಲಾಗಿದೆ ಎಂದು ಹೇಳಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g