ಸೀಜ್ ಮಾಡಿದ್ದರೂ ಹಿಂಬಾಗಿಲಿನಲ್ಲಿ ಓಪನ್, ರೆಸಾರ್ಟ್ಗೆ ಬೀಗ ಹಾಕಿದ ಸಿಡಿಎ ಅಧ್ಯಕ್ಷ ಆನಂದ್
1 min read
ಚಿಕ್ಕಮಗಳೂರು : ವ್ಯವಸಾಯದ ಭೂಮಿಯಾಗಿ ಗ್ರೀನ್ ಜ್ಹೋನ್ನಲ್ಲಿದೆ. ಭೂಮಿ ಕನ್ವರ್ಷನ್ ಕೂಡ ಆಗಿಲ್ಲ. ವರ್ಷದ ಹಿಂದೆಯೇ ಸೀಜ್ ಮಾಡಿದ್ದರೂ ಕೂಡ ಒಳಗಿಂದೊಳಗೆ ಕೆಲಸ ಮಾಡಿ ಅಕ್ರಮವಾಗಿ ಆರಂಭಿಸಿದ್ದ ರೆಸಾರ್ಟ್ಗೆ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಬಿಸಿ ಮುಟ್ಟಿಸಿ ಇಲ್ಲೀಗಲ್ ರೆಸಾರ್ಟ್ಗೆ ಬೀಗ ಹಾಕಿದೆ. ಚಿಕ್ಕಮಗಳೂರು ನಗರದ ಅಲ್ಲಂಪುರ ಬಳಿಯ ಸರ್ವೇ ನಂಬರ್ 16/160ರ ಜಾಗದಲ್ಲಿ ಸವೆನ್-ಹೆವನ್ ಎಂಬ ಹೆಸರಿನಲ್ಲಿ ರೆಸಾರ್ಟ್ ನಿರ್ಮಾಣವಾಗಿತ್ತು. ಇದು ಅಕ್ರಮ ರೆಸಾರ್ಟ್ ಎಂದು ಇಂದು ತಹಶೀಲ್ದಾರ್, ಪೊಲೀಸ್, ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ದಾಳಿ ಮಾಡಿ ರೆಸಾರ್ಟ್ ಅನ್ನು ಸೀಜ್ ಮಾಡಿದ್ದಾರೆ. ಇದೇ ವೇಳೆ ಮಾತನಾಡಿದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆನಂದ್, ಒಂದು ವರ್ಷದ ಹಿಂದೆಯೇ ಈ ರೆಸಾರ್ಟ್ನ ಕೆಲಸ ನಡೆಯುವಾಗ ದಾಳಿ ಮಾಡಿ ಸೀಜ್ ಮಾಡಿದ್ದೇವು. ಅಂದು ಯಾವ ಕೆಲಸವನ್ನೂ ಮಾಡಲ್ಲ ಎಂದು ಹೇಳಿದ್ದರು. ಅವರೇ ಒಪ್ಪಿಕೊಂಡ ಮೇಲೂ ರಾತ್ರೋರಾತ್ರಿ ಒಳಗಿಂದೊಳಗೆ ಕೆಲಸ ಮಾಡಿದ್ದಾರೆ. ಸೀಜ್ ಮಾಡಿದ್ದರೂ ಕೂಡ ಹಿಂದಿನ ಗೇಟ್ ಓಪನ್ ಮಾಡಿಕೊಂಡು ರೂಂಗಳನ್ನ ಕೊಡುವ ಕೆಲಸ ಮಾಡಿದ್ದಾರೆ.
ಯಾರೋ ಒಂದಿಬ್ಬರು ಮಾಡುವ ಇಂಹತಾ ಕೆಲಸಕ್ಕೆ ಎಲ್ಲರಿಗೂ ಕೆಟ್ಟ ಹೆಸರು. ಕಾನೂನಿನಲ್ಲಿ ಅವಕಾಶವಿದೆ. ಏನೇ ಮಾಡಿದರೂ ಕಾನೂನಾತ್ಮಕವಾಗಿ ಮಾಡಿ. ನಾವೇ ಬೆಂಬಲ ನೀಡುತ್ತೇವೆ. ಅನಧೀಕೃತವಾಗಿ ಯಾರು ಯಾವುದೇ ಕೆಲಸ ಮಾಡಿದರೂ ಅವರಿಗೂ ಇದೇ ಸ್ಥಿತಿ ಎಂದು ಎಚ್ಚರಿಕೆ ನೀಡಿದ್ದಾರೆ. ಅವರ ಮೇಲೆ ಕಾನೂನು ಕ್ರಮಕ್ಕೂ ಅವಕಾಶವಿದೆ. ಕ್ರಮ ಕೈಗೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಯವರ ಅನುಮತಿ ಪಡೆದು ಬಿಲ್ಡಿಂಗ್ ಡೆಮಾಲಿಶ್ ಮಾಡುವ ಕೆಲಸವನ್ನೂ ಮಾಡುತ್ತೇವೆ ಎಂದಿದ್ದಾರೆ. ರೆಸಾರ್ಟ್ನಲ್ಲಿ ಸುಮಾರು 15ಕ್ಕೂ ಹೆಚ್ಚು ರೂಂಗಳು ಇದ್ದು, ವೀಕ್ ಎಂಡ್ ಆಗಿರುವುದರಿಂದ ರೂಂಗಳು ಫುಲ್ ಆಗಿದ್ದವು. ಅಧಿಕಾರಿಗಳು ಸೀಜ್ ಮಾಡಿದ ಕೂಡಲೇ ರೆಸಾರ್ಟ್ನವರು ಗೆಸ್ಟ್ಗಳಿಂದ ಪಡೆದ ಹಣವನ್ನ ವಾಪಸ್ ನೀಡುವುದಿಲ್ಲ ಎಂದು ತಗಾದೆ ತೆಗೆದಿದ್ದರು. ಬಳಿಕ ಅಧಿಕಾರಿಗಳೇ ಮಧ್ಯಪ್ರವೇಶಿಸಿ ಗೆಸ್ಟ್ಗಳಿಗೆ ಹಣವನ್ನೂ ಕೊಡಿಸಿದ್ದಾರೆ. ಚಿಕ್ಕಮಗಳೂರಿಗೆ ಒಳ್ಳೆಯ ಹೆಸರು ಇದೆ. ಇಲ್ಲಿನ ಸೌಂದರ್ಯವನ್ನ ಜಗತ್ತಿನ ಜನ ಮೆಚ್ಚಿಕೊಂಡಿದ್ದಾರೆ. ಆ ಹೆಸರಿಗೆ ಯಾರೂ ಕಳಂಕ ತರಬೇಡಿ ಎಂದು ಸಿಡಿಎ ಅಧ್ಯಕ್ಷ ಆನಂದ್ ಮನವಿ ಮಾಡಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g