May 17, 2024

MALNAD TV

HEART OF COFFEE CITY

ನಗರದ ಅಭಿವೃದ್ಧಿಯಲ್ಲಿ ಸಿ.ಟಿ ರವಿ ಕೊಡುಗೆ ಶೂನ್ಯ

1 min read

 

ಚಿಕ್ಕಮಗಳೂರು: ಸಿ.ಟಿ ರವಿ ನಾಲ್ಕು ಬಾರಿ ಶಾಸಕರಾಗಿ, 2 ಬಾರಿ ಸಚಿವರಾಗಿ ಜೊತೆಗೆ ರಾಜ್ಯ ಹಾಗೂ ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇದ್ದರೂ ಸಹ ನಗರಕ್ಕೆ ಅವರ ಕೊಡುಗೆ ಶೂನ್ಯ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ.ಪಿ ಅಂಶುಮಂತ್ ಹೇಳಿದರು.ನಗರದಲ್ಲಿ ಪತ್ರಿಕಾಗೋಷ್ಟಿ ಉದ್ದೇಸಿಸಿ ಮಾತನಾಡಿದ ಅವರು, ನಗರದ ಹಿತ ಕಾಯುವ ಬದಲು ಶಾಸಕ ಸಿ.ಟಿ ರವಿ ಅತ್ಯಂತ ಬೇಜಾವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ. ನಗರದ ಪ್ರತಿಯೊಂದು ವಾರ್ಡ್‍ನಲ್ಲಿಯೂ ಸಹ ಕುಡಿಯುವ ನೀರು, ಚರಂಡಿ, ಯುಜಿಡಿ ವ್ಯವಸ್ಥೆ ಸೇರಿದಂತೆ ಮೂಲಭೂತ ಸಮಸ್ಯೆಗಳು ನಿವಾರಣೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಅಮೃತ್ ಯೋಜನೆ ವಿಫಲವಾಗಿದ್ದು ಶಾಸಕರಿಗೆ ಜನರಿಗೆ ತಲುಪುವ ಯೋಜನೆಗಳ ಬಗ್ಗೆ ಆಸಕ್ತಿ ಇಲ್ಲ, ತಮಗೆ ಇದರಿಂದ ಏನು ಲಾಭ ಎಂಬುದರ ಬಗ್ಗೆ ಆಸಕ್ತಿ ಹೆಚ್ಚಾಗಿದ್ದು ಅವರು ಜನರ ಪರವಾಗಿ ಕೆಲಸ ಮಾಡುವ ಬದಲು ಕಂಟ್ರಾಕ್ಟರ್ ಪರ ಕೆಲಸ ಮಾಡುತ್ತಿದ್ದು ಇದಕ್ಕೆ ನಗರದಲ್ಲಿ ನಡೆದಿರುವ ಕಳಪೆ ಕಾಮಾಗಾರಿಗಳೇ ಉದಾಹರಣೆಯಾಗಿದೆ ಎಂದು ಹೇಳಿದರು.

ನಗರಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಜನಪರವಾದ ವಿಚಾರಗಳನ್ನು ತನ್ನ ಪ್ರಣಾಳಿಕೆಯ ಮೂಲಕ ನಗರದ ಪ್ರತಿ ಮನೆಗೆ ತಲುಪಿಸಿದ್ದು. ಈ ಬಾರಿ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದರು.ನಗರದಲ್ಲಿ ಕಸ ವಿಚಾರದಲ್ಲಿಯೂ ಸಹ ಬಿಜೆಪಿ ಪಕ್ಷದ ಹಿತಕಾಯುವ ಅಂಗಸಂಸ್ಥೆಗೆ ಟೆಂಡರ್ ನೀಡುವ ಮೂಲಕ ಕಸದಲ್ಲಿಯೂ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ ಅವರು ಜನರಿಗೆ ನಗರಸಭೆಯ ಒಳಗೆ ಹೋದರೆ ನರಕಯಾತನೆ ಅನುಭವಿಸುವಂತಾಗಿದೆ ಎಂದರು.

ಕಾಂಗ್ರೆಸ್ ಮುಖಂಡ ಹೆಚ್,ಹೆಚ್ ದೇವರಾಜ್ ಮಾತನಾಡಿ, ನಗರಸಭೆ ಪೌರಾಯುಕ್ತ ಹಾಗೂ ನಗಾರಾಭಿವೃದ್ಧಿ ಪ್ರಾಧಿಇಕಾರದ ಅಧ್ಯಕ್ಷರ ನೇತೃತ್ವದಲ್ಲಿ ಈ ಬಾರಿ ನಗರಸಭೆ ಚುನಾವಣೆ ನಡೆಯುತ್ತಿದೆ. ಎಂಎಲ್‍ಸಿ ಚುನಾವಣೆಯ ಬಳಿಕ ನೂರು ವೊಲ್ಟೇಜ್ ಇದ್ದ ಶಾಸಕ ಸಿ.ಟಿ ರವಿಯವರ ಬಲ್ಪ್ 15 ವೋಲ್ಟ್ಸ್‍ಗೆ ಇಳಿದಿದ್ದು ಬಿಜೆಪಿಯವರ ನರನಾಡಿಗಳು ಸಹ ಅಲುಗಾಡಿದೆ ಎಂದು ಟೀಕಿಸಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!