May 17, 2024

MALNAD TV

HEART OF COFFEE CITY

ಕಾಂಗ್ರೆಸ್ ಚಲಾವಣೆಗೆ ಬಾರದ ಸವಕಲು ನಾಣ್ಯ_ಸಿ.ಟಿ ರವಿ

1 min read

 

ಚಿಕ್ಕಮಗಳೂರು: ಕಾಂಗ್ರೆಸ್ ಚಲಾವಣೆ ಇಲ್ಲದಿರುವ ಸವಕಲು ನಾಣ್ಯ. ಕಾಂಗ್ರೆಸ್ ನಿಲುವುಗಳೇ ಕಾಂಗ್ರೆಸ್‍ಗೆ ಮಾರಕವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ ರವಿ ಹೇಳಿದರು.

ನಗರದಲ್ಲಿ ಈ ಕುರಿತು ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ಮುಂದಿನ ಚುನಾವಣೆಯನ್ನು ಸಿದ್ಧರಾಮಯ್ಯ, ಡಿ.ಕೆ ಶಿವಕುಮಾರ್, ಪೆರಮೇಶ್ವರ್ ಅಥವಾ ಸೋನಿಯಾ ಗಾಂಧಿ ನೇತೃತ್ವದಲ್ಲಿ ಚುನಾವಣೆ ನಡೆಸಿದ್ರು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದರು.ಕಾಂಗ್ರೆಸ್ ನಿಲುವುಗಳು ಹಾಗೂ ತತ್ವಗಳು ಜನಹಿತಕ್ಕೆ ಮಾರಕ, ಅದು ಕೇವಲ ಓಲೈಕೆಯ ರಾಜನೀತಿ. ಈ ಹಿನ್ನೆಲೆಯಲ್ಲಿ ಅವರಿಗೆ ಹಿನ್ನೆಡೆಯಾಗುತ್ತದೆ ಎಂದರು.

2016ರಲ್ಲಿ ಮತಾಂತರ ನಿಷೇಧ ಕಾಯ್ದೆ ಟ್ರಾಫ್ಟ್‍ಗೆ ಸಹಿ ಹಾಕಿದ ಸಿದ್ಧರಾಮಯ್ಯ ಮೊದಲು ಸಹಿನೇ ಹಾಕಿಲ್ಲ ತೋರಿಸಿ ಅಂದ್ರು, ತೋರಿಸಿದ ಮೇಲೆ ನನಗೆ ಗೊತ್ತಿಲ್ಲದೆ ಸಹಿ ಹಾಕಿದ್ದೇನೆ ಎಂದ್ರು ಇವರ ಮಾತುಗಳನ್ನು ಕೇಳಿದರೆ ಹೆಬ್ಬಟ್ಟಿನ ಜನರಿಗಾದ್ರು ತಿಳುವಳಿಕೆ ಇರುತ್ತದೆ. ಏನು ಅಂತಾ ಓದಿ ಹೆಬ್ಬಟ್ಟು ಒತ್ತುತ್ತಾರೆ ಇವರದ್ದು ನಾಟಕ ಎಂದು ವ್ಯಂಗ್ಯವಾಡಿದರು.

ಇನ್ನು ಇದೇ ವೇಳೆ ಮೇಕೆದಾಟು ವಿಚಾರವಾಗಿ ಕಾಂಗ್ರೆಸ್ ಪಾದಯಾತ್ರೆ ತೀರ್ಮಾನದ ಕುರಿತು ಮಾತನಾಡಿದ ಅವರು, ಒಂದು ರಾಜಕೀಯ ಪಕ್ಷವಾಗಿಪಾದಯಾತ್ರೆ, ಉರುಳು ಸೇವೆ ಏನು ಬೇಕಾದ್ರು ಮಾಡಿಕೊಳ್ಳಿ ಆದರೆ ಅವರಿಗೆ ಬದ್ಧತೆ ಇಲ್ಲ. ಕೇಂದ್ರದಲ್ಲಿ 2004 ರಿಂದ 2014ರ ವರೆಗೆ ಕಾಂಗ್ರೆಸ್ ಸರ್ಕಾರ ಇತ್ತು ಆಗ ಅನುಮತಿ ಏಕೆ ನೀಡಲಿಲ್ಲ ಎಂದು ಈಗ ರಾಜಕೀಯ ನಾಟಕವಾಡುತ್ತಿದ್ದಾರೆ ಎಂದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!