April 30, 2024

MALNAD TV

HEART OF COFFEE CITY

ಪೌರಕಾರ್ಮಿಕರ ಪಾದಪೂಜೆ ಮಾಡಿ, ಮಕ್ಕಳ ಜೊತೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಸಿ.ಟಿ.ರವಿ

1 min read

ದೀಪಾವಳಿ ಹಬ್ಬದ ಪ್ರಯುಕ್ತ ಶಾಸಕ ಸಿ.ಟಿ.ರವಿ ಚಿಕ್ಕಮಗಳೂರು ನಗರದ ಪೆನ್ಷನ್ ಮೊಹಲ್ಲಾದಲ್ಲಿ ಪೌರ ಕಾರ್ಮಿಕರ ಪಾದಪೂಜೆ ಮಾಡಿ, ಪಾದಕ್ಕೆ ಹೂವನ್ನಿಟ್ಟು, ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಪ್ರಧಾನಿ ಮೋದಿ ಗಡಿಯಲ್ಲಿ ಸೈನಿಕರ ಜೊತೆ ದೀಪಾವಳಿ ಆಚರಿಸುತ್ತಿದ್ದಾರೆ. ಅವರು ಗಡಿಕಾಯುವ ಸೈನಿಕರ ಜೊತೆ ದೀಪಾವಳಿ ಆಚರಿಸಿದರೆ ನಾವು ಆರೋಗ್ಯದ ರಕ್ಷಣೆಗೆ ಪ್ರತಿನಿತ್ಯ ಹೋರಾಟ ಮಾಡುವ ಪೌರಕಾರ್ಮಿಕರ ಜೊತೆ ದೀಪಾವಳಿ ಆಚರಿಸುತ್ತಿದ್ದೇವೆ. ಪೌರ ಕಾರ್ಮಿಕರಿಗೆ ಪಾದಪೂಜೆ ಮಾಡಿದ್ದು ನಮ್ಮ ಬದುಕಿನಲ್ಲೇ ಒಂದು ಚಿರಸ್ಮರಣೀಯ ಸಂದರ್ಭ ಎಂದರು. ಕಾಯಕವೇ ಕೈಲಾಸ ಎಂಬ ತತ್ವ ಪುನರತ್ಥಾನಗೊಳ್ಳಬೇಕು. ಅಜ್ಞಾನದ ಅಂಧಕಾರ ಹಾಗೂ ಬಡತನ ಮಾತ್ರವಲ್ಲ ಜಾತಿಯತೆಯ ಅಸ್ಪೃಶ್ಯತೆಯ ಭಾವದ ಆ ಕತ್ತಲೂ ಕೂಡ ದೂರವಾಗಬೇಕು ಎಂದರು. ಜ್ಞಾನದ ಬೆಳಕಿನಲ್ಲಿ ಪ್ರತಿಯೊಬ್ಬರನ್ನೂ ಕೂಡ ನಮ್ಮವರ ಎಂದು ನೋಡುವಂತಹಾ ಒಂದು ಭಾವ ನಿರ್ಮಾಣವಾದಾಗ ರಾಷ್ಟçದಲ್ಲಿ ಒಂದು ಶಕ್ತಿ ಬರುತ್ತದೆ ಎಂದರು. ಐದು ಬೆರಳು ಒಂದೇ ಸಮ ಇಲ್ಲ. ಆದರೆ, ಮುಷ್ಠಿ ಕಟ್ಟಿದಾಗ ಒಂದು ಶಕ್ತಿ ಬರುತ್ತದೆ. ಆ ಶಕ್ತಿ ರಾಷ್ಟçಕ್ಕೆ ಬರಬೇಕು ಎಂದರು.

 

 

 

ಪಾದಪೂಜೆಯ ಬಳಿಕ ಪೌರ ಕಾರ್ಮಿಕರ ಮನೆಯ ಹೊರಭಾಗದಲ್ಲಿ ಅವರ ಜೊತೆಯೇ ಪಂಕ್ತಿಭೋಜನ ಮಾಡಿದ್ದಾರೆ. ಬಳಿಕ ಪೌರ ಕಾರ್ಮಿಕರ ಮಕ್ಕಳ ಜೊತೆ ಅವರ ಮನೆ ಮುಂಭಾಗದಲ್ಲೇ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ವೇಳೆ, ನಗರಸಭೆ ಅಧ್ಯಕ್ಷ ವೇಣುಗೋಪಾಲ್, ಸಫಾಯಿ ಕರ್ಮಚಾರಿ ನಿಗಮ ಮಂಡಳಿ ಅಧ್ಯಕ್ಷ ವೆಂಕಟೇಶ್, ಸಿಡಿಎಅಧ್ಯಕ್ಷ ಆನಂದ ಪೌರಾಯುಕ್ತ ಬಸವರಾಜ್ ಸೇರಿದಂತೆ ನಗರಸಭೆ ಸದಸ್ಯರು ಉಪಸ್ಥಿತರಿದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!