ಕಾಂಗ್ರೆಸ್ ಒಡೆದ ಮನೆ ಡಿಸಿಎಂ ಕಾರಜೋಳ ಹೇಳಿಕೆ
ಚಿಕ್ಕಮಗಳೂರು : ನನ್ನ ಮಗ ಎರಡೂವರೆ ತಿಂಗಳು ವೆಂಟಿಲೇಟರ್ನಲ್ಲಿದ್ದ, ವಿನಯ್ ಗುರೂಜಿ ಬೆಂಗಳೂರಿಗೆ ಬಂದು ನಿಮ್ಮ ಮಗನಿಗೆ ಏನೂ ಆಗಲ್ಲ ಎಂದಿದ್ದರು, ನನ್ನ ಮಗ ಈಗ ಆರಾಮಾಗಿದ್ದಾನೆ, ಹಾಗಾಗಿ ದರ್ಶನಕ್ಕೆ ಹೋಗುತ್ತೇನೆ, ರಸ್ತೆ ಹೇಳಿದ್ರು ಅದೂ ಮುಗಿದಿದೆ ಹಾಗಾಗಿ, ಪೂಜೆಗೆ ಕರೆಯಲು ಬಂದಿದ್ದೇನೆ, ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು. ಅಲ್ಲದೆ ಮೈಸೂರಿನಲ್ಲಿ ಕಾಂಗ್ರೆಸ್ ಒಳಜಗಳ ವಿಚಾರಕ್ಕೆ ಸಂಬಂಧ ಪಟ್ಟಂತೆ ಮಾತನಾಡಿದ ಅವರು ಕಾಂಗ್ರೆಸ್ನಲ್ಲಿ ಸಿದ್ದುದು ಒಂದು ಗುಂಪು, ಡಿಕೆಶಿದು ಮತ್ತೊಂದು ಗುಂಪು, ಮಲ್ಲಿಕಾರ್ಜುನ ಖರ್ಗೆಯವರದ್ದು ಇನ್ನೊಂದು ಗುಂಪು, ಕಾಂಗ್ರೆಸ್ ಒಡೆದ ಮನೆಯಾಗಿ ಮೂರು ಗುಂಪುಗಳಾಗಿವೆ. ಮೂರು ಗುಂಪುಗಳ ಮಧ್ಯೆ 24 ಗಂಟೆಯೂ ಗುದ್ದಾಟ ನಡೆದಿರುತ್ತೆ, ಆ ಗುದ್ದಾಟ ಹೊಸದಲ್ಲ, ಅದರಲ್ಲೇ ಕಾಂಗ್ರೆಸ್ ನೆಲಕಚ್ಚಿದೆ ಎಂದು ಹೇಳಿದರು
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g