70 ಅಡಿಕೆ ಮರ ಕಡಿದು ಕಳ್ಳತನ; ಕಳ್ಳನಿಗೆ ಹಿಗ್ಗಾಮುಗ್ಗ ಥಳಿತ
1 min read
ಚಿಕ್ಕಮಗಳೂರು: 70 ಅಡಿಕೆ ಮರಗಳನ್ನು ತೋಟದಲ್ಲಿ ಕಡಿದು ಅಡಿಕೆ ಕದ್ದುಕೊಂಡು ಹೋಗಿದ್ದ ಕಳ್ಳನಿಗೆ ರೈತರು ಹಿಗ್ಗಾ ಥಳಿಸಿ ಠಾಣೆಗೆ ಕರೆದುಕೊಂಡು ಬಂದ ಘಟನೆ ಬಾಳೆಹೊನ್ನೂರಿನಲ್ಲಿ ನಡೆದಿದೆ.
ಕಳೆದ ಎರಡು ದಿನಗಳ ಹಿಂದೆ ಎನ್.ಆರ್.ಪುರ ತಾಲೂಕಿನ ಅಡಿಗೆಬೈಲು ಸಮೀಪದ ಸಿಗ್ಸೇ ಗ್ರಾಮದ ಭಾಸ್ಕರ್ ರಾವ್ ಎಂಬುವರ ತೋಟದಲ್ಲಿ 70 ಅಡಿಕೆ ಮರಗಳನ್ನು ಬುಡಸಮೇತ ಕಡಿದು 3.5 ಕ್ವಿಂಟಾಲ್ ಅಡಿಕೆಯನ್ನು ಕದ್ದೋಯ್ಯಲಾಗಿತ್ತು.
ಈ ಹಿನ್ನೆಲೆ ತೋಟದ ಮಾಲೀಕ ಹಾಗೂ ಸ್ಥಳೀಯರು ಕಳ್ಳನನ್ನು ಪತ್ತೆಹಚ್ಚಿದ್ದು ಕಳ್ಳತನ ಮಾಡಿದ ಶ್ರೀನಿವಾಸ್ ಎಂಬಾತನನ್ನು ಹಿಡಿದಿದ್ದಾರೆ. ಪೊಲೀಸ್ ಠಾಣೆಗೆ ಒಪ್ಪಿಸುವ ಮೊದಲು ಬಾಳೆಹೊನ್ನೂರು ಪಟ್ಟಣದ ನಡುರಸ್ತೆಗಳಲ್ಲಿ ಹಿಗ್ಗಾಮುಗ್ಗಾ ಥಳಿಸಿ ನಂತರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ
ಹತ್ತಾರು ವರ್ಷಗಳಿಂದ ಬೆಳೆದ ಅಡಿಕೆ ಮರಗಳನ್ನೇ ಬುಡಸಮೇತ ಕಡಿದು ಅಡಿಕೆ ಕಳ್ಳತನ ಮಾಡಿದ್ದರಿಂದ ರೈತ ಭಾಸ್ಕರ್ ನೊಂದುಕೊಂಡಿದ್ದರು. ಇದಕ್ಕೆ ಸಮಬಂಧಿಸಿದಂತೆ ಬಾಳೆಹೊನ್ನೂರು ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು ಆದರೆ ಕಳ್ಳ ಸಿಕ್ಕಿರಲಿಲ್ಲ, ಆದ್ರೆ ಇಂದು ಸಿಕ್ಕಿಬಿದ್ದ ಕಳ್ಳನನ್ನು ಸ್ಥಳೀಯರೇ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g