ಈ ಬಾರಿ ನಡೆಯುತ್ತಾ ಚಿಕ್ಕಮಗಳೂರು ಹಬ್ಬ..?
1 min readಚಿಕ್ಕಮಗಳೂರು: ಕಳೆದ ಬಾರಿ ಅದ್ದೂರಿಯಾಗಿ ನಡೆದ ಚಿಕ್ಕಮಗಳೂರು ಜಿಲ್ಲಾ ಉತ್ಸವ ಈ ಬಾರಿ ನಡೆಯುತ್ತಾ ಎಂಬ ಕುತೂಹಲ ಜಿಲ್ಲೆಯ ಜನರಲ್ಲಿ ಮೂಡಿದೆ.
ಕಳೆದ ವರ್ಷ ಈ ವೇಳೆಗಾಗಲೇ ಚಿಕ್ಕಮಗಳೂರು ಹಬ್ಬ ಬಾರಿ ಸದ್ದು ಮಾಡಿತ್ತು, ಆದ್ರೆ ಈ ಬಾರಿ ಹಬ್ಬ ನಡೆಯುವುದಿಲ್ಲ ಎಂಬುದು ಕನ್ಫರ್ಮ್ ಆಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೂ ಕೂಡ ಜಿಲ್ಲಾ ಉತ್ಸವ ನಡೆಸುವುದು ಬೇಡವಾಗಿದೆ. ಕಳೆದ ಬಾರಿ ಜಿಲ್ಲಾಡಳಿತವು ಜಿಲ್ಲಾ ಉತ್ಸವಕ್ಕಾಗಿ ಭಾರೀ ಸಿದ್ಧತೆಗಳನ್ನ ಮಾಡಿಕೊಂಡು ಜಿಲ್ಲಾ ಉತ್ಸವವನ್ನು ಅದ್ದೂರಿಯಾಗಿ ಮಾಡಿತ್ತು. ಜಿಲ್ಲಾಡಳಿತವು ವಿವಿಧ ಪ್ರತಿಯೊಂದು ಇಲಾಖೆಯನ್ನೂ ಬಳಸಿಕೊಂಡು ಕೋಟ್ಯಾಂತರ ಹಣ ಖರ್ಚು ಮಾಡಿ ಜಿಲ್ಲಾ ಉತ್ಸವವನ್ನು ನಡೆಸಿತ್ತು, ಈ ನಡುವೆ ಸರ್ಕಾರ ವರ್ಷ ಕಳೆದರೂ ಚಿಕ್ಕಮಗಳೂರು ಹಬ್ಬಕ್ಕೆ ಖರ್ಚಾದ ಕೋಟಿಯಷ್ಟು ಹಣವನ್ನು ಬಾಕಿ ಉಳಿಸಿರುವುದು ಮಲ್ನಾಡ್ ಟಿ.ವಿ ನಡೆಸಿದ ತನಿಖಾ ವರದಿಯಲ್ಲಿ ಬಹಿರಂಗಗೊಂಡಿದೆ.
ಕಳೆದ ವರ್ಷ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದಿಂದ 4 ಕೋಟಿ ಹಣ ಬಿಡುಗಡೆಯಾದರೂ ಸರಕಾರದ ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ತಮ್ಮ ಅನುದಾನಗಳಲ್ಲಿ ಲಕ್ಷ ಲಕ್ಷ ಹಣ ಖರ್ಚು ಮಾಡಿ ಚಿಕ್ಕಮಗಳೂರು ಹಬ್ಬ ನಡೆಸಿದ್ದವು, ಆದರೆ ಬರೋಬ್ಬರಿ ವರ್ಷ ಕಳೆದರೂ ಕೂಡ ಹಣ ಬಾಕಿ ಉಳಿಸಿಕೊಂಡಿರುವುದು ಬಾರೀ ಚರ್ಚೆಗೆ ಗ್ರಾಸವಾಗಲಿದೆ. ಇದರಲ್ಲಿ ಪ್ರಮುಖವಾಗಿ ಮೂಡುಬಿದರೆ ಆಳ್ವಾಸ್ ನುಡಿಸಿರಿ ಕಾರ್ಯಕ್ರಮ ಒಂದರರದ್ದೇ ಬರೋಬ್ಬರಿ 56 ಲಕ್ಷ ಹಣ ಬಾಕಿ ಉಳಿಸಿಕೊಂಡಿದೆ ಸರ್ಕಾರ, ಜಿಲ್ಲಾ ಪಂಚಾಯ್ತಿ ವತಿಯಿಂದ ವಿಶೇಷ ಕಾಳಜಿ ವಹಿಸಿದ್ದ ಅಂದಿನ ಸಿ.ಇ.ಒ ಜಿ.ಪ್ರಭು ಮನಸ್ಸೋ ಇಚ್ಚೆ ಖರ್ಚು ಮಾಡಿದ್ದ ಕೃಷಿ ಮೇಳದ ಬಾಕಿ ಲಕ್ಷ ಲಕ್ಷ ಹಣ ಇದುವರೆಗೂ ಬಿಡುಗಡೆ ಆಗಿಲ್ಲ, ಶಾಮಿಯಾನ ಸೇರಿದಂತೆ ಇತರೆ ಖರ್ಚುಗಳನ್ನು ಭರಿಸಿದವರ ಬಿಲ್ ಕೂಡ ಪಾವತಿಯಾಗದೆ, ನಿತ್ಯ ಜಿಲ್ಲಾಧಿಕಾರಿ ಕಚೇರಿಗೆ ಅಲೆಯುವಂತಾಗಿದೆ. ಈ ನಡುವೆ ಸರ್ಕಾರದಿಂದ ಬರಬೇಕಾದ ಹಣ ಯಾವಾಗ ಮಂಜೂರಾಗುತ್ತದೆ ಎಂಬುದು ಸದ್ಯ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಅದರಲ್ಲೂ ಈಗಿರುವ ಕಾಂಗ್ರೆಸ್ ಸರ್ಕಾರ ಕಳೆದ ಬಾರಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿರುವ ಚಿಕ್ಕಮಗಳೂರು ಹಬ್ಬದ ಬಾಕಿ ಬಿಡುಗಡೆಗೊಳಿಸುತ್ತಾ ಎಂಬುದು ಕುತೂಹಲ ಹೆಚ್ಚಿಸಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g