ರಾಜ್ಯ ಸರ್ಕಾರ ಎನ್.ಡಿ.ಆರ್.ಎಫ್ ಗೆ ನೀಡದ ಹಣದಲ್ಲಿ ಅರ್ಧದಷ್ಟು ಕೇಂದ್ರ ವಾಪಸ್ ಕೊಟ್ಟಿಲ್ಲ: ಸಚಿವ ಜಾರ್ಜ್
1 min readಚಿಕ್ಕಮಗಳೂರು: ವಾಸ್ತವದಲ್ಲಿ ಎನ್.ಡಿ.ಆರ್.ಎಫ್ ಗೆ ರಾಜ್ಯ ಸರ್ಕಾರವೇ ಹಣ ಸಂದಾಯ ಮಾಡುತ್ತದೆ ಕರ್ನಾಟಕದಿಂದ ನಾಲ್ಕೂವರೆ ಲಕ್ಷ ಕೋಟಿಗೂ ಅಧಿಕ ಹಣ ಕೊಟ್ಟಿದ್ದರೂ ಬರಗಾಲ ಪರಿಸ್ಥಿತಿಯಲ್ಲೂ ಕೇಂದ್ರ ಸರ್ಕಾರ 35 ರಿಂದ 40 ಸಾವಿರ ಕೋಟಿ ಮಾತ್ರ ಕೊಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಇಂಧನ ಸಚಿವ ಕೆ.ಜೆ ಜಾರ್ಜ್ ಆರೋಪಿಸಿದರು.
ಕಡೂರು, ಅಜ್ಜಂಪುರ ತಾಲೂಕಿನ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಬೆಳೆ ನಷ್ಟ ಹಾಗೂ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಡೂರು ತಾಲೂಕಿನ ಬ್ರಹ್ಮಸಮುದ್ರ , ಲಕ್ಷ್ಮಿಪುರ ಲಕ್ಯಾ ಸಮೀಪದ ಕೆಲ ಜಮೀನುಗಳಿಗೆ ತೆರಳಿ ಮೆಕ್ಕೆಜೋಳ, ರಾಗಿ ಬೆಳೆಗಳ ನಷ್ಟದ ಮಾಹಿತಿ ಪಡೆದರು. ಇದೇ ವೇಳೆ ಮಾತನಾಡಿದ ಅವರು ಕೇಂದ್ರ ಸರ್ಕಾರ ನಮಗೆ ಬರ ಪರಿಹಾರದ ಹಣ ಸರಿಯಾಗಿ ನೀಡಿತ್ತಿಲ್ಲ ಎನ್.ಡಿ.ಆರ್.ಎಫ್ ಗೆ ರಾಜ್ಯ ಸರ್ಕಾರದಿಂದ 4.5 ಲಕ್ಷ ಕೋಟಿ ಸಂದಾಯ ಮಾಡಿದರೂ ಅದರಲ್ಲಿ ಕೇವಲ 35 ರಿಂದ 40 ಸಾವಿರ ಕೋಟಿ ಅಷ್ಟೇ ಬಿಡುಗಡೆ ಮಾಡಿದ್ದಾರೆ ಎಂದು ಅವರು ತಿಳಿಸಿದರು. ಬರಗಾಲ ಪರಿಸ್ಥಿತಿ ಬಗ್ಗೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ ಇನ್ನಷ್ಟು ಹೆಚ್ಚಿನ ಪರಿಹಾರವನ್ನು ರಾಜ್ಯ ಸರ್ಕಾರದ ನೀಡಲಿದೆ ಎಂದು ಅವರು ಭರವಸೆ ನೀಡಿದರು. ಬರ ವೀಕ್ಷಣೆ ವೇಳೆ ಕಡೂರು ಶಾಸಕ ಕೆ.ಎಸ್ ಆನಂದ್ ಚಿಕ್ಕಮಗಳೂರು ಶಾಸಕ ಎಚ್.ಡಿ ತಮ್ಮಯ್ಯ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಕೃಷಿ ಇಲಾಖೆ ಅಧಿಕಾರಿಗಳು ಸೇರಿದಂತೆ ಹಲವರು ಸಚಿವರಿಗೆ ಬರಗಾಲದ ಕುರಿತು ಮಾಹಿತಿ ನೀಡಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g