May 19, 2024

MALNAD TV

HEART OF COFFEE CITY

ಬಿಜೆಪಿಯ ವಿಜಯಸಂಕಲ್ಪ ಯಾತ್ರೆಗೆ ಭ್ರಷ್ಟೋತ್ಸವ ಯಾತ್ರೆ ಎಂದು ಹೆಸರಿಡಬೇಕು : ಬಿ.ಕೆ. ಹರಿಪ್ರಸಾದ್

1 min read

ಚಿಕ್ಕಮಗಳೂರು : ಎರಡು ವರ್ಷದಿಂದ ಬಿಜೆಪಿ ಭ್ರಷ್ಟಾಚಾರದಲ್ಲಿ ನಿರತವಾಗಿದ್ದು, ಬಿಜೆಪಿಯ ವಿಜಯಸಂಕಲ್ಪ ಯಾತ್ರೆಗೆ ಭ್ರಷ್ಟೋತ್ಸವ ಯಾತ್ರೆ ಎಂದು ಹೆಸರಿಡಬೇಕು ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಹರಿಹಾಯ್ದರು.

ಶಾಸಕ ವಿರೂಪಾಕ್ಷಪ್ಪನ ಮಗನ ಮೇಲೆ ಲೋಕಾಯುಕ್ತ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಎರಡು ವರ್ಷದಿಂದ ಬಿಜೆಪಿ ಭ್ರಷ್ಟಾಚಾರದಲ್ಲಿ ನಿರತವಾಗಿದ್ದು, ಬಿಜೆಪಿಯ ವಿಜಯಸಂಕಲ್ಪ ಯಾತ್ರೆಗೆ ಭ್ರಷ್ಟೋತ್ಸವ ಯಾತ್ರೆ ಎಂದು ಹೆಸರಿಡಬೇಕು, ಯಾವ ಮುಖ ಇಟ್ಕೊಂಡು ವಿಜಯ ಸಂಕಲ್ಪ ಯಾತ್ರೆ ಮಾಡ್ತಿದ್ದಾರೋ ಗೊತ್ತಿಲ್ಲ, ಸರ್ಕಾರ ಎರಡು ವರ್ಷದಿಂದ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಹೇಳ್ತಿದ್ವಿ, ಬಿಜೆಪಿಯವರು ಸಾಕ್ಷಿ ಕೇಳ್ತಿದ್ರು,  ಬಿಜೆಪಿಯವರು ಭ್ರಷ್ಟಾಚಾರವನ್ನ ವೈಭವೀಕರಿಸುತ್ತಾರೆ, ಇವರಿಗೆ ಇನ್ನು ಸಾಕ್ಷಿ ಬೇಕಂದ್ರೆ ಇವರೇನು‌ ಕರುಡರಾ…? ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬೇಜವಾಬ್ದಾರಿತನದ ಹೇಳಿಕೆ ನೀಡಿದ್ದಾರೆ, ಲೋಕಾಯುಕ್ತ ತನಿಖೆ ನಡೆಯುತ್ತಿದ್ದು   ವರದಿ ಬಂದ ಮೇಲೆ ಕ್ರಮ ಎನ್ನುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರ್ಲ್ಲದೆ, ಸಿ.ಟಿ.ರವಿ ವಿರುದ್ದ ವಾಗ್ದಾಳಿ ನಡೆಸಿದ ಅವರು ಜಿಲ್ಲೆಯ ಮಹಾನಾಯಕ ಎಂದು ಲೇವಡಿ ಮಾಡಿದರಲ್ಲದೆ, ಕೆಲಸ ಮಾಡಿ ಬೆನ್ನು ತಟ್ಟಿಕೊಳ್ಳಲಿ, ಅದು ಬಿಟ್ಟು ಕೆಲಸ ಮಾಡಿದೇ ಬೆನ್ನು ತಟ್ಟಿಕೊಳ್ಳುಗುವುದು ಸರಿಯಲ್ಲ, ಮೋದಿ, ಅಮಿತ್ ಶಾ ಬಲಗೈ ಯಾಗಿರುವ ಆಧುನಿಕ ಭಗರಥ ಎಂದೇ ಕರೆದುಕೊಳ್ಳುವ ಸಿ.ಟಿ.ರವಿ, ಯಾವುದೇ ಅಭಿವೃದ್ದಿ ಕೆಲಸವನ್ನು ಮಾಡಿಲ್ಲ ಎಂದು ಕಿಡಿಕಾರಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!