ಮಲೆನಾಡಿಗೆ ತಂಪೆರೆದ ವರುಷದ ಮೊದಲ ಮಳೆ
1 min readಕಳಸ : ವರ್ಷದ ಮೊದಲ ಮಳೆ ಕಾಫಿನಾಡಿನಲ್ಲಿ ಸುರಿದಿದ್ದು, ಬಿಸಿಲಿನಿಂದ ತತ್ತರಿಸಿದ್ದ ಮಲೆನಾಡಿಗೆ ವರುಣದೇವ ತಂಪೆರೆದಿದ್ದಾನೆ.
ಕಳಸ ತಾಲೂಕಿನ ಹೊರನಾಡು ಸೇರಿದಂತೆ ಮೂಡಿಗೆರೆಯ ಸುತ್ತಮುತ್ತ ಮಧ್ಯಾಹ್ನದ ನಂತರ ಮಳೆ ಸುರಿದಿದೆ. ಬಲಿಗೆ, ಹೊರನಾಡು, ಕಳಸ, ಹೊನ್ನೆ ಕಾಡು, ಮುನ್ನುರ್ ಪಾಲ್, ಹಳುವಳ್ಳಿ ಸೇರಿದಂತೆ ಮೂಡಿಗೆರೆ ಸುತ್ತಮುತ್ತ 1 ಇಂಚಿಗೂ ಹೆಚ್ಚು ಮಳೆ ಸುರಿದಿದೆ. ಮಳೆ ಆಗಮನಕ್ಕಾಗಿ ನಾಳೆ ಕಳಸೇಶ್ವರ ದೇವಸ್ಥಾನದಲ್ಲಿ ಮಲೆನಾಡಿಗರು ವಿಶೇಷ ಪೂಜೆಗೆ ಮುಂದಾಗಿದ್ದರು. ಪೂಜೆಗೂ ಮುನ್ನವೇ ವರ್ಷದ ಮೊದಲ ವರುಣ ಸಿಂಚನವಾಗಿದ್ದು, ವರುಣನ ಆಗಮನದಿಂದ ಮಲೆನಾಡಿಗರಲ್ಲಿ ಸಂತಸ ಹೆಚ್ಚಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g