May 19, 2024

MALNAD TV

HEART OF COFFEE CITY

ಹಸೆಮಣೆ ಏರಬೇಕಾದ ಯುವಕ ಕೊರೋನ ಸೋಂಕಿಗೆ ಬಲಿ : ಮನೆಯಲ್ಲಿ ಸೂತಕದ ಛಾಯೆ

1 min read

ಚಿಕ್ಕಮಗಳೂರು : ಹಸೆಮಣೆ ಏರಬೇಕಾಗಿದ್ದ ಯುವಕ ಕೊರೋನಾ ಸೋಂಕಿಗೆ ಬಲಿಯಾಗಿರುವ ಘಟನೆ ಕೊಪ್ಪ ತಾಲೂಕಿನ ದೇವರಕೊಡಿಗೆ ಗ್ರಾಮದಲ್ಲಿ ನಡೆದಿದೆ.

ಸಂಭ್ರಮ ನೆಲಸಬೇಕಿದ್ದ ಮನೆಯಲ್ಲಿಗ ಸೂತಕದ ಛಾಯೆ ಮನೆ ಮಾಡಿದೆ, ಕಾರಣ ಏನಂತಿರಾ ಕೊರೋನಾ ಹೆಮ್ಮಾರಿ. ಕೊಪ್ಪ ತಾಲೂಕಿನ ದೇವರಕೊಡಿಗೆ ಮೂಲದ 32 ವರ್ಷದ ಪೃಥ್ವಿರಾಜ್ ಕೆಲಸದ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿದ್ದ. ಈತನಿಗೆ ಕೆಲ ದಿನಗಳ ಹಿಂದೆ ವಿವಾಹ ನಿಶ್ಚಯವಾಗಿತ್ತು. ಇಂದು ಮದುವೆ ದಿನ ನಿಗದಿಯಾದ ಕಾರಣ ಬೆಂಗಳೂರಿನಿಂದ ಹತ್ತು ದಿನಗಳ ಹಿಂದೆ ಸ್ವಗ್ರಾಮಕ್ಕೆ ಬಂದಿದ್ದ. ಮದುಮಗನಾಗಿ ಮನೆಯಲ್ಲಿ ನಲಿಯುತ್ತ ಓಡಾಡುತ್ತಿದ್ದ ಪೃಥ್ವಿರಾಜ್ ಇದಕ್ಕಿದಂತೆ ಅಸ್ವಸ್ಥನಾಗಿದ್ದಾನೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು, ಕೊರೋನ ಸೋಂಕು ಧೃಡಪಟ್ಟಿದೆ. ಕೊರೋನಾ ಸೋಂಕಿನ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾನೆ. ಮದುವೆ ನಿಶ್ಚಯವಾದ ಇಂದಿನ ದಿನವೆ ಪೃಥ್ವಿರಾಜ್ ಮೃತಪಟ್ಟಿದ್ದು ವೈವಾಹಿಕ ಜೀವನಕ್ಕೆ ಕಾಲಿಡಬೇಕಿದ್ದವನು ಮಸಣದ ಕಡೆ ಹೆಜ್ಜೆ ಇಕ್ಕಿದ್ದಾನೆ. ಸಂಭ್ರಮ ನೆಲಸಬೇಕಿದ್ದ ಮನೆಯಲ್ಲಿಗ ಸೂತಕದ ಛಾಯೆ ಮನೆ ಮಾಡಿದೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!