May 14, 2024

MALNAD TV

HEART OF COFFEE CITY

ಕತ್ತಲಲ್ಲಿ ಮುಳುಗಿದ ಕೋಗೆ ಗ್ರಾಮ- ಶಾಸಕ ರಾಜೇಗೌಡ ಭೇಟಿ

1 min read

ಕೊಪ್ಪ.: ಚಿಕ್ಕಮಗಳೂರು ಜಿಲ್ಲೆಯ ಮಳೆ ರಾಯನ ಆರ್ಭಟ ಮುಂದುವರೆದಿದೆ. ಕೊಪ್ಪ ತಾಲೂಕಿನಲ್ಲಿ ವ್ಯಾಪಕ‌ ಮಳೆಯಾಗಿದೆ. ಮಳೆಯ ಆರ್ಭಟಕ್ಕೆ ಕೊಪ್ಪ ತಾಲ್ಲೂಕು ನರಸೀಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೋಗೆ ಗ್ರಾಮದಲ್ಲಿ ಗುರುವಾರ ತಡರಾತ್ರಿ ವಿದ್ಯುತ್ ತಂತಿ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಸುಮಾರು 8 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.

ಕೋಗೆ ಗ್ರಾಮದ ರಾಘವೇಂದ್ರ ಅವರ ಮನೆಯ ಮುಂದೆ ಬೃಹತ್ ಆಕಾರ ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದು ಸುಮಾರು 8 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು. ಕೋಗೆ ಗ್ರಾಮದಲ್ಲಿ 20 ಕ್ಕೂ ಹೆಚ್ಚು ಮನೆಗಳು ವಿದ್ಯುತ ಇಲ್ಲದೆ ಕತ್ತಲಲ್ಲಿ ಪರದಾಡುವಂತಾಗಿದೆ. ಘಟನಾಸ್ಥಾಳಕ್ಕೆ ಶೃಂಗೇರಿ ಕ್ಷೇತ್ರದ ಜನಪ್ರೀಯ ಶಾಸಕ ಟಿ. ಡಿ .ರಾಜೇಗೌಡರು ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದು ತಕ್ಷಣ ಸಂಬಂಧ ಪಟ್ಟ ಇಲಾಖೆಯ ಇಂಜಿನಿಯರ್ ಗೆ 2 ದಿನದ ಒಳಗಾಗಿ ವಿದ್ಯುತ್ ಕಂಬಗಳನ್ನು ಹಾಕಿ ದುರಸ್ತಿ ಪಡಿಸುವಂತೆ ಸೂಚಿಸಿದರು.

 

 

 

 

ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷರಾದ ಓಣಿತೋಟ ರತ್ನಕರ್. ಊರಿನ ಪ್ರಮುಖರಾದ ವಿಜೇಂದ್ರ ಕೋಗೆ. ಜಯಪುರ ಗ್ರಾಮ ಪಂಚಾಯತ್ಯ ಮಾಜಿ ಅಧ್ಯಕ್ಷರು ರಾಜೇಂದ್ರ , ರಾಘವೇಂದ್ರ. ಸುಪೇಶ ನಿಖಿಲ್ ನಿರ್ದೇಶ. ರಮೇಶ. ಸವಿನ. ಅನಿಲ್. ಇತರರು ಇದ್ದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!