ಗುಟ್ಕಾ ಅಂಗಡಿ ಮೇಲೆ ದಾಳಿ: ಜಿಗಣೆ ಗೊತ್ತಾ..? ಮಳೆಗಾಲದಲ್ಲಿ ಬನ್ನಿ ತೋರುಸ್ತೀವಿ.. ಹಳ್ಳಿಗರು-ಅಧಿಕಾರಿಗಳಿಗೆ ಕ್ಲಾಸ್
1 min readಚಿಕ್ಕಮಗಳೂರು: ಗುಟ್ಕಾ ಅಂಗಡಿಗಳ ಮೇಲೆ ದಾಳಿಗೆ ಬಂದ ಅಧಿಕಾರಿಗಳಿಗೆ ಹಳ್ಳಿಗರು ಕ್ಲಾಸ್ ತೆಗೆದುಕೊಂಡಿರುವ ಘಟನೆ ಶೃಂಗೇರಿ ತಾಲೂಕು ನೆಮ್ಮಾರು ಗ್ರಾಮದಲ್ಲಿ ನಡೆದಿದೆ. ಇಂದು ಅಧಿಕಾರಿಗಳು ಗ್ರಾಮದ ಗುಟ್ಕಾ ಅಂಗಡಿಗಳಿಗೆ ದಾಳಿ ಮಾಡಿದ್ದಾರೆ ಆ ಸಂದರ್ಭದಲ್ಲಿ ಅಲ್ಲೇ ಇದ್ದ ಹಳ್ಳಿಗರೆಲ್ಲಾ ಸೇರಿ ನಶ್ಯ, ಗುಟ್ಕಾ, ಸಿಗರೇಟ್ ಅಂಗಡಿಗಳ ಮೇಲಲ್ಲ ನಿಮ್ಮ ದಾಳಿ, ತಯಾರಿಸುವ ಕಂಪನಿಗಳ ಮೇಲೆ ದಾಳಿ ಮಾಡಿ ಅವನ್ನು ಬ್ಯಾನ್ ಮಾಡಿ ಎಂದು ಅಧಿಕಾರಿಗಳಿಗೆ ಅಂಗಡಿ ಬಳಿ ಕ್ಲಾಸ್ ತೆಡೆದುಕೊಂಡಿದ್ದಾರೆ.
ಮಳೆಗಾಲದಲ್ಲಿ ನಮಗೆ ನಶ್ಯ ಬೇಕೇಬೇಕು, ಅದಿಲ್ಲದಿದ್ದರೆ ಆಗಲ್ಲ, ನಿಮಗೆ ಜಿಗಣೆ ಗೊತ್ತಾ, ಮಳೆಗಾಲದಲ್ಲಿ ಬನ್ನಿ ತೋರುಸ್ತೀವಿ. ಹರಳೆಣ್ಣೆಗೆ ನಶ್ಯ, ಹೊಗೇಸೊಪ್ಪು ಮಿಕ್ಸ್ ಮಾಡಿ ಹಚ್ಕೊಂಡು ಕೆಲಸಕ್ಕೆ ಹೋಗ್ತೀವಿ ನಮ್ಮ ಕಷ್ಟ ನಮಗೆ ಗೊತ್ತು ಎಂದು ದಾಳಿಗೆ ಬಂದ ಅಧಿಕಾರಿಗಳ ವಿರುದ್ಧ ಗರಂ ಆದ್ರೂ.
ಒಂದು ಸಿಗರೇಟ್ ಖರೀದಿಸಿ ಸೇದುದ್ರೆ ತಪ್ಪು, ಪ್ಯಾಕ್ ಖರೀದಿಸಿ ಸೇದಿದ್ರೆ ಸರಿಯಾ…? ಎಂದ ಹಳ್ಳಿಗರು ಅಧಿಕಾರಿಗಳೊಂದಿಗೆ ವಾದಕ್ಕೆ ಇಳಿದರು. ಇದನ್ನು ಗಮನಿಸಿದಂತಹ ಅಧಿಕಾರಿಗಳು ಇದು ನಮಗೆ ಬಂದಿರುವ ಆದೇಶ ನೀವು ಡಿಸಿ-ಎಸ್ಪಿಗೆ ಫೋನ್ ಮಾಡಿ ಎಂದರು. ಅದ್ಕಕೆ ಹಳ್ಳಿಗರು ಅವರ ನಂಬರ್ ಕೊಡಿ ಅವರಿಗೂ ನಾವೇ ಕೇಳ್ತೀವಿ ಎಂದು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g