ನಗರಸಭೆ ಅಧ್ಯಕ್ಷರ ಮೇಲೆ ಹಲ್ಲೆ ಯತ್ನ: ಬಸವನಹಳ್ಳಿ ಪೊಲೀಸರಿಗೆ ದೂರು
1 min readಚಿಕ್ಕಮಗಳೂರು: ಕಸದ ಡಂಪಿಂಗ್ ಯಾರ್ಡ್ ವಿರೋಧಿಸಿ ಪ್ರತಿಭಟನೆ ವೇಳೆ ಸ್ಥಳಕ್ಕೆ ತೆರಳಿದ ನಗರಸಭೆ ಅಧ್ಯಕ್ಷ ವೇಣುಗೋಪಾಲ್ ಮೇಲೆ ಹಲ್ಲೆಗೆ ಯತ್ನಿಸಿದ ಮಧುಕುಮಾರ್ ರಾಜ್ ಅರಸ್ ಸೇರಿ ಮೂವರ ಮೇಲೆ ಪೊಲೀಸರಿಗೆ ದೂರು ನೀಡಿದ್ದಾರೆ.
ನಗರದ 60 ಅಡಿ ರಸ್ತೆಯ ಸಹರಾ ಶಾದಿ ಮಹಲ್ ಬಳಿ ನಗರಸಭೆ ಉಪಾಧ್ಯಕ್ಷ ಅಮೃತೇಶ್ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ತೆರಳಿದಾಗ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮೇಲೆ ಹಲ್ಲೆಗೆ ಯತ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಡಿ ಬಸವನಹಳ್ಳಿ ಪೊಲೀಸ್ ಠಾಣೆಗೆ ವೇಣುಗೋಪಾಲ್ ದೂರು ನೀಡಿದ್ದಾರೆ. ಕಸದ ಯಾರ್ಡ್ ಕಾಮಗಾರಿ ನಡೆಸುತ್ತಿರುವ ಬಗ್ಗೆ ಪ್ರತಿಭಟನಾಕಾರರಿಗೆ ಮನವರಿಕೆ ಮಾಡಲು ಮುಂದಾದ ವೇಳೆ ನಗರಸಭೆ 5ನೇ ವಾರ್ಡ್ ಸದಸ್ಯ ಮಧುಕುಮಾರ್ ರಾಜ್ ಅರಸ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾದರು ಎಂದು ದೂರಿನಲ್ಲಿ ಹೇಳಲಾಗಿದೆ. ಇದೇ ವೇಳೆ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಕೈಯಲ್ಲಿದ್ದ ಸ್ಯಾಮ್ಸಂಗ್ ಗೆಲಕ್ಸಿ S22 Ultra ಮೊಬೈಲ್ ಬಿದ್ದು ಹಾಳಾಗಿದೆ ಅಲ್ಲದೇ 50 ಗ್ರಾಂ ನ ಚಿನ್ನದ ಚೈನ್ ಕತ್ತಿನಿಂದ ಬಿದ್ದಿದೆ ಎಂದು ಕಂಪ್ಲೇಂಟ್ ನೀಡಲಾಗಿದೆ. ಘಟನೆ ವೇಳೆ ನಗರಸಭೆ ಉಪಾಧ್ಯಕ್ಷ ಅಮೃತೇಶ್ ಹಾಗೂ ಆತನ ಸಹೋದರ ಅವಿಶಿತ್ ಸಹಾ ಹಲ್ಲೆಗೆ ಮುಂದಾದ ಆರೋಪ ಹೊರಿಸಲಾಗಿದೆ.
ನಾನು ತೆರಳಿದ ವೇಳೆ ಪ್ರತಿಭಟನಾ ಸ್ಥಳದಲ್ಲಿ ಇದ್ದ ರಾಡ್ ಹಾಗೂ ಇತ್ಯಾದಿ ಮಾರಕಾಸ್ತ್ರಗಳಿಂದ ಹೊಡೆಯಲು ಸಹಾ ಪ್ರಯತ್ನಿಸಿದರು ಎಂದು ತಮ್ಮ ದೂರಿನಲ್ಲಿ ವರಸಿದ್ದಿ ಹೇಳಿದ್ದಾರೆ, ಅಲ್ಲದೇ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪ ಸಹಾ ಪ್ರತಿಭಟನಾಕಾರರ ಮೇಲೆ ಹೊರಿಸಲಾಗಿದೆ, ಈ ನಡುವೆ ಗಲಾಟೆ ನಡೆಯುವ ಸೂಚನೆ ಇರುವುದರ ಬಗ್ಗೆ ಮೊದಲೇ ಡಿವೈಎಸ್.ಪಿ ಯವರಿಗೆ ತಿಳಿಸಿದ್ದರೂ ಸ್ಥಳದಲ್ಲಿದ್ದ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು ಎಂದು ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g