May 13, 2024

MALNAD TV

HEART OF COFFEE CITY

ಹಿಂದು ಅರ್ಚಕರು, ಮುಜಾವರ್ ಗಳಿಗೆ ಗನ್’ಮ್ಯಾನ್ ಗಳ ನೇಮಕ

1 min read

ದತ್ತಜಯಂತಿ ಹಿನ್ನೆಲೆಯಲ್ಲಿ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ಕಳೆದ ಬಿಜೆಪಿ ಸರ್ಕಾರದಲ್ಲಿ ನೇಮಕವಾಗಿರುವ ಇಬ್ಬರು ಅರ್ಚಕರು ಸೇರಿದಂತೆ ಐವರಿಗೆ ಜಿಲ್ಲಾ ಪೊಲೀಸ್ ಗನ್ ಮ್ಯಾನ್ ಗಳನ್ನು ನೇಮಿಸಿದೆ.ದತ್ತಪೀಠ ವ್ಯವಸ್ಥಾಪನಾ ಸಮಿತಿಯ ಎಸ್.ಎಂ ಬಾಷಾ, ಅರ್ಚಕರಾದ ಶ್ರೀಧರ್ ಪೂಜಾರ್, ಶಿವರಾಂ ಭಟ್ ಹಾಗೂ ಮುಜಾವರ್ ಗಳಾದ ಸೈಯದ್ ಅಖಿಲ್ ಪಾಷಾ ಹಾಗೂ ಇಸ್ಮಾಯಿಲ್ ಸೇರಿದಂತೆ ಐವರಿಗೆ ಗನ್ ಮ್ಯಾನ್ ಗಳನ್ನು ರಕ್ಷಣೆಗಾಗಿ ನೇಮಿಸಲಾಗಿದೆ.

ದತ್ತಜಯಂತಿ ಹಿನ್ನೆಲೆಯಲ್ಲಿ ಈ ಐದೂ ಜನರಿಗೆ ಗನ್ ಮ್ಯಾನ್ ನೀಡಲಾಗಿದ್ದು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸರನ್ನು ಇವರ ರಕ್ಷಣೆಗೆಂದು ನಿಯೋಜಿಸಲಾಗಿದೆ. ಪ್ರಾಣ ಭೀತಿ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಐದೂ ಜನರಿಗೆ ದಿನದ ೧೬ ಗಂಟೆಗಳ ಕಾಲ ಗನ್ ಮ್ಯಾನ್ ಸೌಲಭ್ಯ ಕಲ್ಪಿಸಲಾಗಿದೆ.

ನಿತ್ಯ ದತ್ತಪೀಠದಲ್ಲಿ ಪೂಜೆ ಸಲ್ಲಿಸುವ ಶ್ರೀಧರ್ ರಿಗೆ ಮುಖ್ಯಪೇದೆ ದುಗ್ಗಪ್ಪ, ಶಿವರಾಂ ಭಟ್ಟರಿಗೆ ನಂಜುಂಡ ಸ್ವಾಮಿ ಮುಜಾವರ್ ಅಖಿಲ್ ಪಾಷಾರಿಗೆ ಸಂದೀಪ್ ,, ಇಸ್ಮಾಯಿಲ್ ಅವರಿಗೆ ಪ್ರಭು ಹಾಗೂ ಐ.ಡಿ ಪೀಠ ವ್ಯವಸ್ಥಾಪನ ಸಮಿತಿಯ ಎಸ್.ಎಂ ಬಾಷಾರಿಗೆ ಎಎಸ್ಐ ಗಿರಿಧರ್ ರನ್ನು ಗನ್ ಮ್ಯಾನ್ ಆಗಿ ನೇಮಿಸಲಾಗಿದೆ. ದತ್ತಜಯಂತಿ ಮುಗಿಯುವವರೆಗೂ ಶಸ್ತ್ರ ಸಜ್ಜಿತ ಪೊಲೀಸರು ಈ ಐವರ ರಕ್ಷಣೆಯ ಕರ್ತವ್ಯ ನಿರ್ವಹಿಸಲಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!