May 15, 2024

MALNAD TV

HEART OF COFFEE CITY

ಟ್ರಾನ್ಸ್ ಫರ್ ಆಗಿದ್ದಕ್ಕೆ ಶಾಸಕನ ವಿರುದ್ಧ ಸಮರಕ್ಕಿಳಿದ ಮಹಿಳಾ ಪೇದೆ

1 min read

 

ಚಿಕ್ಕಮಗಳೂರು.ವರ್ಗಾವಣೆಯಾಗಿದ್ದಕ್ಕೆ ನನ್ನ ಟ್ರಾನ್ಸ್‍ಫರ್ ಆಗಲು ಶಾಸಕನೇ ಕಾರಣ ಎಂದು ಮಹಿಳಾ ಪೇದೆ ಶಾಸಕನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಮರಕ್ಕಿಳಿದ ಘಟನೆ ಜಿಲ್ಲೆಯ ಕಡೂರು ಠಾಣೆಯಲ್ಲಿ ನಡೆದಿದೆ. ಕಡೂರು ಠಾಣೆಯಲ್ಲಿ ಪೇದೆಯಾಗಿ ಕೆಲಸ ಮಾಡುತ್ತಿದ್ದ ಲತಾ ಬಿ.ಎಸ್. ಅವರನ್ನ ಕಡೂರಿನಿಂದ ತರೀಕೆರೆಗೆ ವರ್ಗಾವಣೆ ಮಾಡಲಾಗಿತ್ತು. ಆ ವರ್ಗಾವಣೆಯನ್ನ ವಿರೋಧಿಸಿ
ಪೇದೆ ಲತಾ ಶಾಸಕರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಸಮರ ಸಾರಿದ ಹಿನ್ನೆಲೆ ಸೇವೆಯಿಂದ ಅಮಾನತುಗೊಂಡಿದ್ದಾರೆ. ನನ್ನ ವರ್ಗಾವಣೆ ದ್ವೇಷದ ವರ್ಗಾವಣೆ ಎಂದು ಕಡೂರು ಶಾಸಕ ಆನಂದ್ ವಿರುದ್ಧ ಮೌನ ಸಮರದ ಮೂಲಕ ಲತಾ ಆಕ್ರೋಶ ಹೊರಹಾಕಿರೋ ವಾಟ್ಸಾಪ್ ಸ್ಟೇಟಸ್ ವೈರಲ್ ಆಗಿದೆ. ಚುನಾವಣೆ ವೇಳೆ, ಕಾಂಗ್ರೆಸ್ ಕಾರ್ಯಕರ್ತರು ಹೆಲ್ಮೆಟ್ ಹಾಕಿಲ್ಲ ಎಂದು ಪೇದೆ ದಂಡ ಹಾಕಿದ್ದರು ಎಂದು ಹೇಳಲಾಗಿದೆ. ಆ ವಿಚಾರವಾಗಿ ಸ್ಥಳಕ್ಕೆ ಬಂದು ಅಂದಿನ ಕಾರ್ಯಕರ್ತನಾಗಿದ್ದ ಆನಂದ್ ಆಕ್ರೋಶ ಹೊರಹಾಕಿದ್ದರು. ಆನಂದ್ ಪೆÇಲೀಸರ ವಿರುದ್ಧ ಅಸಮಾಧಾನಗೊಂಡಿದ್ದ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚುನಾವಣೆ ಮುಗಿದ ಬಳಿಕ ಮಹಿಳಾ ಪೇದೆಯನ್ನು ಕಡೂರಿನಿಂದ ತರೀಕೆರೆಗೆ ವರ್ಗಾವಣೆ ಮಾಡಿಸಿದ್ದಾರೆ. ಈ ವರ್ಗಾವಣೆ ಹಳೇಯ ದ್ವೇಷಕ್ಕೆ ಎಂದು ಮಹಿಳಾ ಪೇದೆ ಆಕ್ರೋಶ ಹೊರಹಾಕಿದ್ದಾರೆ. ಈ ಮಧ್ಯೆ ಕಳೆದ ಎರಡ್ಮೂರು ದಿನಗಳ ಹಿಂದೆ ಶಾಸಕರ ಮನೆಗೆ ತೆರಳಿ ಮಹಿಳಾ ಪೇದೆ ವರ್ಗಾವಣೆಯ ವಿಚಾರವಾಗಿ ಪ್ರಶ್ನಿಸಿದ್ದಾರೆ. ಆಗ ಶಾಸಕ ನೀನು ಯಾರೆಂದೇ ಗೊತ್ತಿಲ್ಲ ಕಣಮ್ಮಾ… ನಾನೇಕೆ ವರ್ಗಾವಣೆ ಮಾಡಿಸಲಿ ಎಂದಿದ್ದಾರಂತೆ. ಅಲ್ಲಿಂದ ಬಂದ ಪೇದೆ ನನಗೆ ಏನಾದರೂ ತೊಂದರೆಯಾದರೆ ಎಂಎಲ್‍ಎನೇ ಕಾರಣ? ಕಡೂರು ಎಂಎಲ್‍ಎಗೆ ನನ್ನ ಕಡೆಯಿಂದ ಧಿಕ್ಕಾರವಿರಲಿ ಎಂದು ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿದ್ದರು. ಪಿಎಸ್‍ಐ ಜೊತೆಯೂ ಏರುಧ್ವನಿಯಲ್ಲಿ ಮಾತನಾಡಿ, ರಿಲೀವ್ ಲೇಟರ್ ತೆಗೆದುಕೊಳ್ಳದೆ, ನನಗೆ ಏನು ಮಾಡಬೇಕೆಂದು ಗೊತ್ತು. ನನಗೆ ಏನೂ ಬೇಡ ಎಂದು ಹೋದರಂತೆ. ಪಿಎಸ್‍ಐ ವರದಿ ಆಧಾರದ ಮೇಲೆ ಚಿಕ್ಕಮಗಳೂರು ಎಸ್ಪಿ ಉಮಾಪ್ರಶಾಂತ್ ಲತಾರನ್ನ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಆಕೆ ಯಾರೆಂದೇ ನನಗೆ ಗೊತ್ತಿಲ್ಲ : ಮಹಿಳಾ ಪೇದೆಯ ಆರೋಪವನ್ನ ಶಾಸಕ ಆನಂದ್ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಅವರ ವರ್ಗಾವಣೆಯಲ್ಲಿ ನನ್ನ ಹಸ್ತಕ್ಷೇಪವಿಲ್ಲ. ಈ ವಿಚಾರವಾಗಿ ನಾನು ಯಾವುದೇ ಲೇಟರ್ ಕೂಡ ನೀಡಿಲ್ಲ. ಇದು ಪೆÇಲೀಸ್ ಇಲಾಖೆಯಲ್ಲಿನ ಜನರಲ್ ಟ್ರಾನ್ಸ್‍ಫರ್ ಇರಬಹುದು. ನನಗೆ ಯಾವುದೇ ಮಾಹಿತಿಯಿಲ್ಲ ಎಂದಿದ್ದಾರೆ. ನನಗೆ ಆಕೆ ಯಾರೆಂದೇ ಗೊತ್ತಿಲ್ಲ. ನಾನು ಆಕೆ ಮುಖ ನೋಡಿದ್ದೇ ನಮ್ಮ ಮನೆಗೆ ಬಂದಾಗ. ಕಡೂರಿಗೆ ಬರುವವರಿಗೆ-ಹೋಗುವವರಿಗೆ ಪತ್ರ ನೀಡಿದ್ದೇನೆ. ಆದ್ರೆ, ಇವರ ವಿಚಾರದಲ್ಲಿ ನನಗೇನು ಗೊತ್ತಿಲ್ಲ. ನಾನೇಕೆ ಅವರನ್ನ ವರ್ಗ ಮಾಡಿಸಲಿ ಎಂದಿದ್ದಾರೆ. ಇದು ರಾಜಕೀಯ ಪ್ರೇರಿತ ಇರಬಹುದು. ರಾಜಕೀಯ ವೈಷಮ್ಯಕ್ಕೆ ಈ ರೀತಿ ಮಾಡಿಸಿರಬಹುದು ಎಂದಿದ್ದಾರೆ. ಶಿಸ್ತು ಕಾಪಾಡುವ ಪೆÇಲೀಸ್ ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿಯೊಬ್ಬರು ಶಾಸಕ ಸ್ಥಾನಕ್ಕೆ ಅಗೌರವ ತೋರುವ ರೀತಿಯಲ್ಲಿ ವರ್ತಿಸಿರುವುದರ ಕುರಿತು ಘಟನೆಯ ಬಗ್ಗೆ ವಿಧಾನಸಭೆಯ ಸ್ಪೀಕರ್ ಅವರ ಗಮನಕ್ಕೆ ತಂದು ಸೂಕ್ತ ಕ್ರಮಕ್ಕಾಗಿ ಒತ್ತಾಯಿಸುತ್ತೇನೆ ಎಂದಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!