ಪ್ರಿಯತಮನಿಗಾಗಿ ಪ್ರೇಮಿ ಜೊತೆ ಸೇರಿ ಪತಿಯನ್ನ ಕೊಂದ ಪತ್ನಿ
1 min readಪ್ರೇಮಿ ಜೊತೆ ಸೇರಲು ಅಡ್ಡಗಳಾಗಿದ್ದ ಪತಿಯನ್ನ ಪತ್ನಿಯೇ ಲವರ್ ಜೊತೆ ಸೇರಿ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಯಗಟಿ ಸಮೀಪದ ಹನುಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತನನ್ನ 28 ವರ್ಷದ ಕಿರಣ್ ಎಂದು ಗುರುತಿಸಲಾಗಿದೆ. ಮೃತ ನವೀನ್ ಹಾಗೂ ಕೊಲೆಗಾತಿ ಪಾವನಾಗೆ ಆರು ವರ್ಷದ ಹಿಂದೆ ಮದುವೆಯಾಗಿತ್ತು. 4 ವರ್ಷದ ಹೆಣ್ಣು ಮಗು ಕೂಡ ಇತ್ತು. ಮದುವೆ ನಂತರದ ಪ್ರೇಮಿಯಿಂದ ಗಂಡ ಹೆಂಡತಿಯ ಬಗ್ಗೆ ಆಗಾಗ ಜಗಳ ಕೂಡ ನಡೆಯುತ್ತಿತ್ತು. ಊರಿನ ಹಿರಿಯರು ಹಾಗೂ ಕುಟುಂಬಸ್ಥರು ಮಧ್ಯಸ್ಥಿಕೆವಹಿಸಿ ರಾಜಿ ಪಂಚಾಯಿತಿ ಕೂಡ ಮಾಡಿದ್ದರು. ಆದರೆ, ಪ್ರೇಮಿಯನ್ನು ಬಿಡಲು ಒಪ್ಪದ ಪಾವನ ಲವರ್ ಜೊತೆ ಸೇರಿ ಗಂಡನನ್ನ ಮುಗಿಸಿದ್ದಾಳೆ. ಚಪಾತಿ ಕಲಸುವ ನೀರಿಗೆ ನಿದ್ದೆ ಮಾತ್ರೆಯನ್ನ ಬೆರೆಸಿ ಆ ನೀರಿನಿಂದ ಚಪಾತಿ ಹಿಟ್ಟನ್ನ ಕಲೆಸಿ ಚಪಾತಿ ಮಾಡಿದ್ದಳು. ಆ ಚಪಾತಿಯನ್ನು ಪತಿಗೆ ತಿನ್ನಿಸಿದ್ದಳು. ಪತಿ ಜ್ಞಾನ ತಪ್ಪಿದ ಬಳಿಕ ಅವನದ್ದೇ ಬೈಕಿನಲ್ಲಿ ಪ್ರೇಮಿ ಜೊತೆ ಸೇರಿ ಊರಿನಿಂದ ಮೂರು ಕಿಲೋಮೀಟರ್ ದೂರವಿರುವ ಕೆರೆಗೆ ತಂದು ಎಸೆದಿದ್ದಾರೆ. ಆತ್ಮಹತ್ಯೆಯೆಂದು ಬಿಂಬಿಸಲು ಆತನ ಚಪ್ಪಲಿ, ಬ್ಯಾಟರಿ ಸೇರಿದಂತೆ ಇತರೆ ವಸ್ತುಗಳನ್ನ ಕೆರೆಯ ದಡದಲ್ಲಿ ಅಲ್ಲಲ್ಲೇ ಎಸೆದಿದ್ದಾರೆ. ಆಗಸ್ಟ್ 5 ಶನಿವಾರ ರಾತ್ರಿ ದಾನ ತಪ್ಪಿದ ಕಿರಣ್ ನನ್ನ ಕೆರೆಗೆ ಎಸೆದಿದ್ದರು. ಭಾನುವಾರ ಮಧ್ಯಾನ ಕಿರಣ್ ಮೃತದೇಹ ಪತ್ತೆಯಾಗಿತ್ತು. ಕುಟುಂಬಸ್ಥರು 28 ವರ್ಷದ ಮಗ, ಸಾಲವು ಇರಲಿಲ್ಲ. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಕಡೂರು ತಾಲೂಕು ಆಸ್ಪತ್ರೆಯಲ್ಲಿ ಮಾಡಿಸದೆ, ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ತಂದಿದ್ದರು. ಮಾಡೋತರ ಪರೀಕ್ಷೆಯ ವರದಿ ಬಂದ ಬಳಿಕ ಪ್ರೇಮಿ ಜೊತೆ ಸೇರಿ ಹೆಂಡತಿ ಮಾಡಿದ ಕಣ್ಣ ಮುಚ್ಚಾಲೆ ಆಟ ಬಟಾ ಬಯಲಾಗಿತ್ತು ಇಬ್ಬರು ಪ್ರೇಮ ಕೈದಿಗಳು ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ. ಯಗಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g