May 2, 2024

MALNAD TV

HEART OF COFFEE CITY

ಜನರ ಮೇಲೆ ಸಾಲದ ಹೊರೆ ಹೊರೆಸಿದ ಬಜೆಟ್

1 min read

ಚಿಕ್ಕಮಗಳೂರು : ಕೋವಿಡ್ 19 ರ ಸಂಕಷ್ಟಕ್ಕೆ ಒಳಗಾಗಿ ನಲುಗಿ ಹೋಗಿರುವ ರಾಜ್ಯದ ಜನರ ಪಾಲಿಗೆ ಊರುಗೋಲಾಗಿ ನಿಂತು ರಾಜ್ಯವನ್ನು ಅಭಿವೃದ್ಧಿಯತ್ತ ಮುನ್ನಡೆಯುವ ಸಂಕಲ್ಪವನ್ನು ಬಜೆಟ್ನಲ್ಲಿ ಮಾಡಬಹುದೆನ್ನುವ ನಿರೀಕ್ಷೆಯನ್ನು ಮುಖ್ಯಮಂತ್ರಿಗಳು ಹುಸಿಗೊಳಿಸಿದ್ದಾರೆ ಎಂದು ಜೆ.ಡಿ.ಎಸ್ ನ ಮೂಡಿಗೆರೆಯ ಮಾಜಿ ಸಚಿವರಾದ ಬಿ.ಬಿ ನಿಂಗಯ್ಯ ಅಭಿಪ್ರಾಯಿಸಿದ್ದಾರೆ. ನಿರಿಕ್ಷೇಯಂತೆ ವರಮಾನ ಸಂಗ್ರಹದಲ್ಲಿ ಉಂಟಾಗಿರುವ ಕೊರತೆ ನೀಗಿಸಲು ಮುಖ್ಯಮಂತ್ರಿಗಳು ದೊಡ್ಡ ಪ್ರಮಾಣದ ಸಾಲ ತರುವ ಪ್ರಸ್ತಾಪವನ್ನು ಅಂದರೆ 71.332 ಕೋಟಿ ರೂಪಾಯಿ ಸಾಲ ಮುಂದಿಟ್ಟಿದ್ದಾರೆ. ಇದರಿಂದ ಸಾಲ ಮಾಡಿಯಾದರೂ ಹೋಳೀಗೆ ಊಟ ಮಾಡು ಎಂಬ ನಾಣ್ಣುಡಿಯಂತೆ ಜನರ ಮೇಲೆ ಸಾಲದ ಹೊರೆ ಹೊರೆಸಿದ್ದಾರೆ. ಹೀಗೆ ಬಡ್ಡಿ ಪಾವತಿಸಿ ತಂದ ಸಾಲದ ಮೊತ್ತವನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ಮೇರೆಗೆ ಉಪಯೋಗಿಸಲು ಚಿತ್ತ ಹರಿಸಿಲ್ಲ. ಅದರ ಬದಲು ತಮ್ಮ ಹಳೆಯ ಶೈಲಿಯಲ್ಲಿ ಎಲ್ಲಾ ಸಮುದಾಯಗಳಿಗೆ ಉದಾರವಾಗಿ ಹಂಚಿ ರಾಜ್ಯದ ಜನರನ್ನು ಮೆಚ್ಚಿಸುವ ಕಸರತ್ತು ನಡೆಸಿದ್ದಾರೆ ಎಂದು ಹೇಳಿದರು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!