ಮಾಲೀಕನನ್ನ ಚಿರತೆ ಬಾಯಿಂದ ತಪ್ಪಿಸಿದ ಶ್ವಾನ
1 min readಚಿಕ್ಕಮಗಳೂರು.: ಮಾಲೀಕನ ಪಕ್ಕದಲ್ಲಿ ಮಲಗಿದ್ದ ನಾಯಿಯನ್ನ ಹಿಡಿಯಲು ಬಂದ ಚಿರತೆಯೊಂದು ವಿಫಲ ಯತ್ನ ನಡೆಸಿರೋ ಘಟನೆ ಜಿಲ್ಲೆಯ ಅಜ್ಜಂಪುರ ತಾಲೂಕಿನ ಚೀರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಚೀರನಹಳ್ಳಿ ಗ್ರಾಮದ ರಾಜೀವ್ ಎಂಬುವರ ಅಡಿಕೆ ಸುಲಿಯುವ ಮನೆಯಲ್ಲಿ ಈ ಘಟನೆ ನಡೆದಿದೆ.
ಜಿಲ್ಲೆಯ ತರೀಕೆರೆ, ಕಡೂರು, ಬೀರೂರು ಹಾಗೂ ಅಜ್ಜಂಪುರ ಭಾಗದಲ್ಲಿ ಈಗ ಅಡಿಕೆ ಸುಲಿಯುವ ಕಾಲ. ಹೆಂಗಸರೆಲ್ಲಾ ಒಂದೆಡೆ ಕೂತು ಅಡಿಕೆ ಸುಲಿಯುವ ಜಾಗಕ್ಕೆ ಅಡಿಕೆ ಚೇಣಿ ಮನೆ ಅಂತಾರೆ. ಈ ಚೇಣಿ ಮನೆಯಲ್ಲಿ ಹಗಲಿರುಳು ಅಡಿಕೆ ಇರುವ ಕಾರಣ ಇಡೀ ರಾತ್ರಿ ಅಡಿಕೆಯ ಕಾಯುವಿಕೆಗಾಗಿ ಕೆಲಸಗಾರರು ಇರುತ್ತಾರೆ. ಆದರೆ, ಕಳೆದ ರಾತ್ರಿ ಅಡಿಕೆ ಮನೆಗೆ ಬಂದ ಚಿರತೆ ಇಬ್ಬರು ಕಾರ್ಮಿಕರ ಪಕ್ಕದಲ್ಲಿ ನಾಯಿಯೊಂದು ಮಲಗಿತ್ತು. ನಾಯಿಯನ್ನ ಸೆರೆಹಿಡಿಯಲು ಸುಮಾರು ಹೊತ್ತು ಹೊಂಚು ಹಾಕಿದೆ. ನಿಧಾನ ಹೋಗಿ ನಾಯಿಯನ್ನ ಕಚ್ಚಿ ಎಳೆದು ತರುವಷ್ಟರಲ್ಲಿ ನಾಯಿ ಜೋರಾಗಿ ಕೂಗಿ ಚಿರತೆ ಬಾಯಿಂದ ತಪ್ಪಿಸಿಕೊಂಡಿದೆ. ಆಗ ಕೂಡಲೇ ಎಚ್ಚರಗೊಂಡ ಇಬ್ಬರು ಕೂಲಿ ಕಾರ್ಮಿಕರು ಚಿರತೆಯನ್ನ ಕಂಡು ಗಾಬರಿಯಿಂದ ಕೂಗಾಡಿದ್ದಾರೆ. ಕಾರ್ಮಿಕರು ಕೂಗಾಡುತ್ತಿದ್ದಂತೆ ಚಿರತೆಯೂ ಗಾಬರಿಬಿದ್ದು ಓಡಿದೆ. ಒಂದು ವೇಳೆ ಕಾರ್ಮಿಕರ ಜೊತೆ ನಾಯಿ ಇರದಿದ್ದರೆ ಬಹುಶಃ ಇಬ್ಬರು ಕಾರ್ಮಿಕರಲ್ಲಿ ಒಬ್ಬರು ಚಿರತೆಗೆ ಬಾಯಿಗೆ ಆಹಾರವಾಗುವ ಸಾಧ್ಯತೆ ಇತ್ತು. ಆದರೆ, ನಾಯಿಯಿಂದ ಮಾಲೀಕನ ಪ್ರಾಣ ಉಳಿದಂತಾಗಿದೆ. ನಾಯಿಯ ಸೂಕ್ಷ್ಮ ಹಾಗೂ ಸಮಯ ಪ್ರಜ್ಞೆಯಿಂದ ತನ್ನ ಪ್ರಾಣ ಉಳಿಸಿಕೊಳ್ಳುವುದರ ಜೊತೆ ತನ್ನ ಮಾಲೀಕನ ಪ್ರಾಣವನ್ನೂ ಉಳಿಸಿದೆ. ಈ ಭಾಗಳದಲ್ಲಿ ಕಳೆದ ಹಲವು ತಿಂಗಳಿಂದ ಚಿರತೆ ಕಾಟ ಯತೇಚ್ಛವಾಗಿದೆ. ಹಾಗಾಗಿ, ಸ್ಥಳಿಯರು ಕೂಡಲೇ ಅರಣ್ಯ ಅಧಿಕಾರಿಗಳು ಚಿರತೆಯನ್ನ ಸೆರೆ ಹಿಡಿದು ಕಾಡಿಗೆ ಬಿಡಬೇಕು ಎಂದು ಆಗ್ರಹಿಸಿದ್ದಾರೆ. ಚಿರತೆ ಭಯದಿಂದ ಈ ಭಾಗದ ಜನ ಸಂಜೆಯಾಗುತ್ತಿದ್ದಂತೆ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g