ಬಾಬಾಬುಡನ್ ಗಿರಿ ದತ್ತಪೀಠದಲ್ಲಿ ಹೊಸ ಆಚರಣೆ ವಿವಾದ: ಜಿಲ್ಲಾಡಳಿತಕ್ಕೆ ಹೊಸ ತಲೆಬೇನೆ
1 min readಚಿಕ್ಕಮಗಳೂರು: ವಿವಾದಿತ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಮತ್ತೆ ಹೊಸ ಆಚರಣೆಗಳ ವಿವಾದಗಳು ಆರಂಭಗೊಳ್ಳುತ್ತಿವೆ. ಶಾಖಾದ್ರಿ ವಂಶಸ್ಥನೊಬ್ಬ ಅಜ್ಮತ್ ಪಾಷ ಗರ್ಭಗುಡಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲು ಅನುಮತಿ ಕೇಳಿ ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ಹೊಸ ತಲೆ ಬೇನೆಯಾಗಿ ಪರಿಣಮಿಸಿದ್ದಾರೆ.
ವಿವಾದಿತ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಹೊಸ ಆಚರಣೆಗಳಿಗೆ ಸುಪ್ರೀಂ ಕೋರ್ಟ್ ಸ್ಪಷ್ಟ ನಿಷೇಧವಿದ್ದರೂ, ಶಾಖಾದ್ರಿ ವಂಶಸ್ಥ ಅಜ್ಮತ್ ಪಾಷಾ ಎಂಬುವರು ಐ.ಡಿ ಪೀಠ ಗರ್ಭಗುಡಿಯಲ್ಲಿ ಫಾತಿಹ ನಡೆಸಲು ಅನುಮತಿ ಕೇಳುವ ಮೂಲಕ ಹೊಸದೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಜನವರಿ 17 ಕ್ಕೆ ಅರೇಬಿಕ್ ಶ್ಲೋಕ ಹೇಳುವ ಅವಕಾಶ ಕೇಳಿದ್ದರು. ಅದರಂತೆ ಸಂಪೂರ್ಣ ಖಾವಿಧಾರಿಯಾಗಿ ಅಜ್ಮತ್ ಪಾಷಾ ಎಂಬ ಫಕೀರರು ಪ್ರಾರ್ಥನೆ ಸಲ್ಲಿಸಲು ಆಗಮಿಸಿದ್ದರು. ಆದರೆ ಜಿಲ್ಲಾಡಳಿತ ಅವಕಾಶ ಕೊಡಲಿಲ್ಲ, ಅಲ್ಲದೆ ಐ.ಡಿ ಪೀಠದ ಸುತ್ತಮುತ್ತ 200 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿ ಖುದ್ದು ಎಸ್ಪಿ ವಿಕ್ರಂ ಅಮಟೆ ಬಂದೋಬಸ್ತ್ ನೇತೃತ್ವ ವಹಿಸಿದ್ದರು. ಈ ನಡುವೆ ಸಂಘ ಪರಿವಾರ ಸಹ ದತ್ತಾಪೀಠದಲ್ಲಿ ಇದೇ ದಿನ ವಿಶೇಷ ಪೂಜೆ ಸಲ್ಲಿಸಲು ಅನುಮತಿ ಕೋರಿದ್ದರು ಇದಕ್ಕೂ ಸಹ ಜಿಲ್ಲಾಡಳಿತ ಅವಕಾಶ ಕೊಟ್ಟಿಲ್ಲ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g