ಚಾರ್ಮಾಡಿ ವಾಹನ ಸವಾರರಿಗೆ ಕಾಡಾನೆ ಭೀತಿ
1 min readಚಿಕ್ಕಮಗಳೂರು: ಮೊನ್ನೆಯಷ್ಟೆ ಆನೆ ಟಾಸ್ಕ್ ಫೋರ್ಸ್ ಸಿಬ್ಬಂದಿಯನ್ನು ಬಲಿ ಪಡೆದಿದ್ದ ಕಾಡಾನೆಗಳು ಇಂದು ಮತ್ತೆ ಪ್ರತ್ಯಕ್ಷವಾಗಿವೆ. ಚಾರ್ಮಾಡಿ ಘಾಟಿಯಲ್ಲಿ ಕಾಡಾನೆಗಳು ಇಂದು ಮತ್ತೆ ಪ್ರತ್ಯಕ್ಷವಾಗಿವೆ, ಚಾರ್ಮಾಡಿಯ ಮಲಯ ಮಾರುತ ಬಳಿ ಗಜಪಡೆ ಕಾಣಿಸಿಕೊಂಡಿದ್ದು, ಚಿಕ್ಕಮಗಳೂರು-ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ನಲ್ಲಿ ಇಂದು ಬೆಳಿಗ್ಗೆ ತೋಟಕ್ಕೆ ನುಗ್ಗಿ ಸಾಕಷ್ಟು ಬೆಳೆ ಹಾನಿ ಮಾಡಿವೆ, ಈ ಭಾಗದಲ್ಲಿ ಸಂಚರಿಸುತ್ತಿದ್ದ ಆನೆಗಳ ಹಿಂಡನ್ನು ಹರಸಾಹಸ ಪಟ್ಟು ಪಟಾಕಿ ಸಿಡಿಸಿ ಅರಣ್ಯ ಸಿಬ್ಬಂದಿಗಳು ಕಾಡಿಗಟ್ಟಿದ್ದಾರೆ.
ಆದರೆ ಘಾಟಿ ರಸ್ತೆಯಲ್ಲಿ ರಾತ್ರಿ ವೇಳೆ ಆನೆಗಳು ರಸ್ತೆಗೆ ಬಂದರೆ ತಪ್ಪಿಸಿಕೊಳ್ಳೋದು ಕಷ್ಟಸಾಧ್ಯ ಎಂದು ವಾಹನ ಸವಾರರು ಭೀತಿ ವ್ಯಕ್ತಪಡಿಸುತ್ತಾರೆ, ಚಾರ್ಮಾಡಿ ಘಾಟಿಯ ಎರಡೂ ಬದಿಯಲ್ಲೂ ಸಾವಿರಾರು ಅಡಿ ಪ್ರಪಾತವಿದ್ದು ವಾಹನವನ್ನ ವಾಪಸ್ ತೆಗೆಯೋದು ಕಷ್ಟಸಾಧ್ಯವಾಗಿದ್ದು ಇತ್ತೀಚಿಗೆ ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆ ಹಾವಳಿ ಯಥೇಚ್ಛವಾಗುತ್ತಿದ್ದು 2 ತಿಂಗಳಲ್ಲಿ ಮೂವರನ್ನ ಬಲಿ ಪಡೆದಿರುವುದು ಇಲ್ಲಿ ಗಮನಾರ್ಹ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g