ಈ ಬಾರಿ 224.6 ಕೋಟಿ ಉಳಿತಾಯ ಬಜೆಟ್ ಮಂಡನೆ ಸಿ.ಡಿ.ಎ. ಅಧ್ಯಕ್ಷ ಸಿ ಆನಂದ್
1 min readಚಿಕ್ಕಮಗಳೂರು : 2021-22 ನೇ ಸಾಲಿನಲ್ಲಿ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರ 224.6 ಕೋಟಿ ನಿವ್ವಳ ಲಾಭ ಗಳಿಸಿ ಉಳಿತಾಯ ಬಜೆಟ್ ಮಂಡಿಸಲಾಗಿದೆ ಎಂದು ಸಿ.ಡಿ.ಎ ಅಧ್ಯಕ್ಷ ಸಿ.ಆನಂದ್ ತಿಳಿದರು.
ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಮಗ್ರ ನಗರದ ಅಭಿವೃದ್ಧಿ ಹಾಗೂ ವಿವಿಧ ಕರ ವಸೂಲಿಯಿಂದ ಪ್ರಾಧಿಕಾರ 2021-22 ನೇ ಸಾಲಿಗೆ ಉಳಿತಾಯ ಬಜೆಟ್ ಮಂಡಿಸಲಾಗಿದ್ದು ರಾಜ್ಯದಲ್ಲೇ ಉತ್ತಮವಾಗಿದ್ದು ವಾಜಪೇಯ ಬಡಾವಣೆ, ಕೆರೆಗಳ ಅಭಿವೃದ್ಧಿ ಹಾಗೂ ರೈತರಿಂದ ಜಮೀನು ಪಡೆದು ಬಡಾವಣೆ ನಿರ್ಮಿಸುವ ಉದ್ದೇಶವಿದ್ದು ಯಾವುದೇ ಬಂಡವಾಳ ಕೊರತೆ ಇಲ್ಲ ಎಂದು ಸಿಡಿಎ ಅಧ್ಯಕ್ಷ ಸಿ ಆನಂದ್ ಹೇಳಿದ್ರು
ಇದೇ ವೇಳೆ ಮಾತನಾಡಿದ ಪ್ರಾಧಿಕಾರದ ಆಯುಕ್ತ ಬಸವರಾಜ್ ನಗರದಲ್ಲಿ ವಿವಿಧ ಅನುದಾನದ ಅಡಿ ಪಾರ್ಕ್ ಬೀದಿ ದೀಪ ಸೇರಿದಂತೆ ರಸ್ತೆ ಕಾಮಗಾರಿಗಳ ಟೆಂಡರ್ ಕರೆಯಲಾಗಿದೆ ಎಂದರು. ಅಲ್ಲದೇ ಇನ್ನೂ ಅನೇಕ ಅಭಿವೃದ್ಧಿ ಕೆಲಸಗಳಿಗೆ ಹಣ ಮೀಸಲಿರಿಸಲಾಗಿದೆ ಎಂದು ತಿಳಿಸಿದರು
ಪತ್ರಿಕಾಗೋಷ್ಠಿಯಲ್ಲಿ ಪ್ರಾಧಿಕಾರದ ಸಹಾಯಕ ಆಯುಕ್ತ ಶಿವಕುಮಾರ್ ಸಿ.ಡಿ.ಎ ಸದಸ್ಯ ಮಂಜುನಾಥ್, ಸೂರ್ಯ ಗೋವಿಂದ, ರಾಜಕುಮಾರ್ ಹಾಜರಿದ್ದರು
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g