May 4, 2024

MALNAD TV

HEART OF COFFEE CITY

ಕಾಫಿನಾಡಲ್ಲಿ ಗ್ಯಾಸ್ ಕಟ್ಟರ್ ನಲ್ಲಿ ಎಟಿಎಂ ಕೊಯ್ದು 14 ಲಕ್ಷ ದರೋಡೆ

1 min read

 

ಚಿಕ್ಕಮಗಳೂರು. ಗ್ಯಾಸ್ ಕಟ್ಟರ್ ಮೂಲಕ ಎಟಿಎಂ ಮೆಷನ್ ಕೊಯ್ದ ದರೋಡೆಕೋರರು ಕೆನರಾ ಬ್ಯಾಂಕ್ ಎಟಿಎಂನಲ್ಲಿದ್ದ ಹಣವನ್ನ ದರೋಡೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ಹೌಸಿಂಗ್ ಬೋರ್ಡ್‍ನಲ್ಲಿ ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬ್ಯಾಂಕಿನಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಎಟಿಎಂ ಮೆಷಿನ್ ಒಳಗಿದ್ದ ಸಿಸಿಟಿವಿಯನ್ನ ನಿಷ್ಕ್ಟ್ರಿಯಗೊಳಿಸಿ, ಗ್ಯಾಸ್ ಕಟ್ಟರ್‍ನಲ್ಲಿ ಎಟಿಎಂ ಮೆಷಿನ್ ಕಟ್ ಮಾಡಿರೋ ಕಳ್ಳರು ಎಟಿಎಂನಲ್ಲಿದ್ದ ಸುಮಾರು 14 ಲಕ್ಷದಷ್ಟು ಹಣವನ್ನ ದರೋಡೆ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ರಸ್ತೆಯಲ್ಲಿರುವ ಎಟಿಎಂ ಮೆಷಿನ್ ಕಟ್ ಮಾಡಿ ಹಣ ದೋಚಿರುವುದರಿಂದ ಜನಸಾಮಾನ್ಯರು ಕೂಡ ಆತಂಕಕ್ಕೀಡಾಗಿದ್ದಾರೆ. ಸ್ಥಳಕ್ಕೆ ಕೆನರಾ ಬ್ಯಾಂಕ್ ಹಿರಿಯ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ನಾನಾ ಭಾಗಗಳಲ್ಲಿ ತೀವ್ರ ಕಳ್ಳತನವಿತ್ತು. ಒಂದೇ ರಾತ್ರಿಗೆ ಐದಾರು ಅಂಗಡಿ ದೋಚಿದ್ರು. ಹಾಡಹಗಲೇ ಮನೆ ಕಳ್ಳತನ ನಡೆದಿತ್ತು. ಇದೀಗ, ಜಿಲ್ಲಾ ಕೇಂದ್ರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಟಿಎಂ ಮೆಷಿನ್ ಅನ್ನೇ ದೋಚಿರುವುದರಿಂದ ಜನ ತೀವ್ರ ಭಯಭೀತರಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರೊ ಗ್ರಾಮಾಂತರ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!