ಗುಂಡಿ ಬಿದ್ದ ಚಿಕ್ಕಮಗಳೂರು-ಶೃಂಗೇರಿ ಮಾರ್ಗ, ಗುಂಡಿ ಮುಚ್ಚಿದ ಪೊಲೀಸರು
1 min readತಾಲೂಕಿನ ದತ್ತಪೀಠದಲ್ಲಿ ಪೊಲೀಸರು ರಸ್ತೆಯ ಗುಂಡಿ ಮುಚ್ಚಿದ ಬೆನ್ನಲ್ಲೇ ಆಲ್ದೂರಿನಲ್ಲೂ ಕೂಡ ಪೊಲೀಸರು ರಸ್ತೆ ಗುಂಡಿಗೆ ಮಣ್ಣು ಸುರಿದು ಗುಂಡಿ ಮುಚ್ಚಿದ್ದಾರೆ. ಚಿಕ್ಕಮಗಳೂರು-ಶೃಂಗೇರಿಯ ರಾಜ್ಯ ಹೆದ್ದಾರಿ ಚಿಕ್ಕಮಗಳೂರು ತಾಲೂಕಿನ ಆಲ್ದೂರಿನ ರಸ್ತೆಯಲ್ಲಿ ಯತೇಚ್ಛವಾಗಿ ಗುಂಡಿಗಳಿದ್ದವು. ವಾಹನ ಸವಾರರು ವಾಹನಗಳನ್ನ ಚಾಲಾಯಿಸುವುದೇ ದುಸ್ಥರವಾಗಿತ್ತು. ಈ ಮಾರ್ಗದಲ್ಲಿ ಶಾಲೆ ಕೂಡ ಇತ್ತು. ರಸ್ತೆಯ ಗುಂಡಿಗಳಿಂದ ಅಪಘಾತ ಕೂಡ ಹೆಚ್ಚಿದ್ದವು. ಗುಂಡಿ ತಪ್ಪಿಸಲು ಹೋಗಿ ಬಿದ್ದು-ಎದ್ದು ಹೋಗುವವರ ಬೈಕ್ ಸವಾರರ ಸಂಖ್ಯೆಗೇನು ಕೊರತೆ ಇರಲಿಲ್ಲ. ಹಾಗಾಗಿ, ಪೊಲೀಸರೇ ಮೂರು ಟ್ರ್ಯಾಕ್ಟರ್ ಮಣ್ಣು ತರಿಸಿ ವಿಥ್ ಯೂನಿಫಾರಂ ಕೈನಲ್ಲಿ ಗುದ್ದಲಿ ಹಿಡಿದು ರಸ್ತೆಗೆ ಮಣ್ಣು ತುಂಬಿ ಹಾಕಿದ್ದಾರೆ. ಶಾಲಾ ಮಕ್ಕಳು ಓಡಾಡುವ ಜಾಗ ಹಾಗೂ ರಸ್ತೆಯ ಗುಂಡಿಗಳಿಂದ ಹೆಚ್ಚು ಅಪಘಾತ ನಡೆಯುವ ತಾಣ ಎಂದು ಶ್ರಮಧಾನದ ಮೂಲಕ ರಸ್ತೆಗೆ ಮಣ್ಣು ಹಾಕಿ ಗುಂಡಿ ಮುಚ್ಚಿದ್ದಾರೆ. ಸರ್ಕಲ್ ಇನ್ಸ್ಪೆಕ್ಟರ್ ಸತ್ಯನಾರಾಯಣ, ಪಿಎಸ್ಐ ಅಕ್ಷಿತಾ ಹಾಗೂ ಕೀರ್ತಿಕುಮಾರ್ ಉಪಸ್ಥಿತರಿದ್ದರು. ಇನ್ನು ಎರಡು ದಿನಗಳ ಹಿಂದಷ್ಟೆ, ತಾಲೂಕಿನ
ತಾಲೂಕಿನ ಮುಳ್ಳಯ್ಯನಗಿರಿ ತಪ್ಪಲಿನ ದತ್ತಪೀಠದಿಂದ ಮಾಣಿಕ್ಯಾದಾರದ ರಸ್ತೆ ತೀವ್ರ ಹಾಳಾಗಿತ್ತು ಎಂದು ಪೊಲೀಸರೇ ಗುದ್ದಲಿ-ಪಿಕಾಸಿ ಹಿಡಿದು ರಸ್ತೆ ರಿಪೇರಿ ಮಾಡಿದ್ದರು. ಈ ರಸ್ತೆ ದುರಸ್ಥಿ ಬಗ್ಗೆ ಹಲವು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರು. ಆದರೆ, ಅವರು ಸೂಕ್ತ ರೀತಿಯಲ್ಲಿ ಸ್ಪಂದಿಸಿರಲಿಲ್ಲ. ನಿತ್ಯ ಟ್ರಾಫಿಕ್ ಸಮಸ್ಯೆಯಿಂದ ಹೈರಾಣಾಗಿದ್ದ ಪೊಲೀಸರೇ ರಸ್ತೆ ರಿಪೇರಿಗೆ ಮುಂದಾಗಿದ್ದರು. ಆಳ ಗುಂಡಿ ಬಿದ್ದ ಜಾಗದಲ್ಲಿ ಕಲ್ಲು ಹಾಗೂ ಮಣ್ಣನ್ನ ಹಾಕಿ ಸುಗಮ ವಾಹನ ಓಡಾಟಕ್ಕೆ ಅನುವು ಮಾಡಿಕೊಟ್ಟಿದ್ದರು. ಪೊಲೀಸರು ಈ ಕೆಲಸವನ್ನ ಕಂಡ ಟೂರಿಸ್ಟ್ ಗಾಡಿ ಚಾಲಕರು ಕೂಡ ಪೊಲೀಸರ ಜೊತೆ ಕೈ ಜೋಡಿಸಿದ್ದಾರೆ. ಇದೀಗ, ಅಪಘಾತಗಳನ್ನ ತಪ್ಪಿಸಲು ಆಲ್ದೂರು ಪೊಲೀಸರು ಕೂಡ ರಸ್ತೆಯಲ್ಲಿನ ಗುಂಡಿಗಳಿಗೆ ಮಣ್ಣು ಹಾಕಿ ಗುಂಡಿ ಮುಚ್ಚಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಜನಸಾಮಾನ್ಯರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g