ವಿಶ್ವ ಅಯೋಡಿನ್ ಕೋರತೆಯ ನಿವಾರಣಾದಿನ ಹಾಗೂ ಸಪ್ತಾಹ ಸಮಾರಂಭ
1 min readಚಿಕ್ಕಮಗಳೂರು-ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಕ್ರೀಡೆ ಮತ್ತು ವಿಜ್ಞಾನದ ಬಗ್ಗೆ ವಿಶೇಷ ಆಸಕ್ತಿ ಹೊಂದಿದಾಗ ಜೀವನದ ಗುರಿ ಮುಟ್ಟಬಹುದೆಂದು ಎಂಇಎಸ್ ಕಾಲೇಜಿನ ಪ್ರಾಂಶುಪಾಲರಾದ ಜಯಶ್ರೀ ತಿಳಿಸಿದರು.
ನಗರದ ಎಂಇಎಸ್ ಕಾಲೇಜಿನ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವಿಚಕ್ಷಣಾ ಘಟಕ ಹಾಗೂ ಮಲೆನಾಡು ವಿದ್ಯಾಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ರಾಷ್ಟಿçoಯ ಅಯೋಡಿನ್ ಕೊರತೆಯ ನಿವಾರಣಾ ದಿನ ಹಾಗೂ ಸಪ್ತಾಹ ಸಮಾರಂಭದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕ್ವಿಜ್ ಕಾರ್ಯಕ್ರಮ ಏರ್ಪಡಿಸಿ, ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿ, ಆಧುನಿಕ ಕಾಲದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಶಿಕ್ಷಣ ಪಡೆಯುವುದರ ಜತೆಗೆ ಕ್ವಿಜ್ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಸಾಧಿಸುವ ಛಲ ಬರುತ್ತದೆ ಎಂದರು.
ತಾಲೂಕು ವೈದ್ಯಾದಿಕಾರಿ ಡಾ. ಸೀಮಾ ಮಾತನಾಡಿ ದೇಶದಾದ್ಯಂತ ಅಯೋಡಿನ್ ಕೊರತೆಯ ಬಗ್ಗೆ ತಿಳಿಸಲಾಗುತ್ತಿದೆ, ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ರಸಪ್ರಶ್ನೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ, ನಮ್ಮ ಬೆಳವಣಿಗೆಗೆ ಅಯೋಡಿನ್ ಅತಿಮುಖ್ಯ, ಅಯೋಡಿನ್ ಕೊರತೆಯಿಂದ ಥೈರಾಯ್ಡ್ ಸಮಸ್ಯೆ, ಬುದ್ದಿಮಾಂದ್ಯತೆ, ಕಿವಿ ಕೇಳಿಸದೆ ಇರುವ ಸಮಸ್ಯೆ ಉಂಟಾಗುತ್ತದೆ, ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸುಕೊಳ್ಳುತ್ತದೆ ಪ್ರತಿಯೋಬ್ಬರು ಅಯೋಡಿನ್ಯುತ ಉಪ್ಪನ್ನು ಬಳಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ವಕ್ಷಣ ಅಧಿಕಾರಿ ಡಾ. ಮಂಜುನಾಥ್, ಡಾ. ಸುಬಾಷ್, ಜಿಲ್ಲಾ ಉಪ ಅಧಿಕಾರಿ ಲಲಿತ, ಜಲಜಾಕ್ಷಿ ಬೇಬಿ, ಕಲಾಧರೆ, ರುಕಿಯಾ, ಮುಖ್ಯ ಶಿಕ್ಷಕರಾದ ಬಿ.ಎಂ.ಲೋಕೇಶ್ ಉಪಸ್ಥಿತರಿದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g