ಸೇತುವೆಯಿಲ್ಲದೆ ಕೆಲ್ಲಳ್ಳಿ ಗ್ರಾಮಸ್ಥರ ಪರದಾಟ
1 min readಚಿಕ್ಕಮಗಳೂರು : ಕಾಫಿನಾಡಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿದ್ದು, ಬಹಳಷ್ಟು ಗ್ರಾಮಗಳಿಗೆ ಹಳ್ಳ, ನದಿ, ಹೊಳೆಗಳನ್ನೆ ಹಾದು ಹೋಗಬೇಕು. ಈ ಗ್ರಾಮಗಳಿಗೆ ಸಂಪರ್ಕಕ್ಕೆ ಸರಿಯಾದ ಸೇತುವೆಗಳಿಲ್ಲದೆ ಇರುವುದರಿಂದ ಮಳೆಗಾಲದಲ್ಲಿ ಮಲೆನಾಡು ಭಾಗದ ಜನರ ಪರಿಸ್ಥಿತಿ ಹೇಳತೀರದು.
ಚಿಕ್ಕಮಗಳೂರು ತಾಲೂಕಿನ ಆವುತಿ ಹೋಬಳಿಯ ಕೆಲ್ಲಳ್ಳಿ ಗ್ರಾಮದಲ್ಲಿ ಹಳ್ಳವೊಂದು ದುಮ್ಮಿಕ್ಕಿ ಹರಿಯುತ್ತಿದ್ದು, ಕೆಲ್ಲಳ್ಳಿ-ಬೆರಣಗೋಡು-ಬಸರವಳ್ಳಿ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಹಳ್ಳದಲ್ಲಿ ನೀರು ರಭಸವಾಗಿ ಹರಿಯುತ್ತಿರುವುದರಿಂದ ಹಳ್ಳ ದಾಟಲಾರದೇ ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು ಪರದಾಡುವಂತಾಗಿದೆ. ಚುನಾವಣೆಯಲ್ಲಿ ಮತ ಕೇಳಲು ಬರುವ ಜನಪ್ರತಿನಿಧಿಗಳು ಚುನಾವಣೆ ನಂತರ ನಮ್ಮ ಸಂಕಷ್ಟಕ್ಕೆ ಸ್ಪಂಧಿಸುವ ಕೆಲಸ ಮಾಡುವುದಿಲ್ಲ, ಪ್ರತಿ ವರ್ಷದ ಮಳೆಗಾಲದಲ್ಲೂ ನಮ್ಮದು ಇದೇ ಪ್ರರಿಸ್ಥಿತಿಯಗಾಗಿದ್ದು ನಮ್ಮನ್ನ ಆದಿವಾಸಿಗಳಂತೆ ನೋಡಬೇಡಿ, ನಾಗರಿಕರಂತೆ ಪರಿಗಣಿಸಿ ಒಕ್ಕೊರಲಿನಿಂದ ಹೇಳಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g